ವಿಜಯೇಂದ್ರಗೆ ತಪ್ಪಿದ ಟಿಕೆಟ್ – ಬಿಎಸ್ ವೈ ಪುತ್ರನ ನಾಗಾಲೋಟಕ್ಕೆ ಸಂತೋಷ್ ಹಾಕಿದ್ರಾ ಬ್ರೇಕ್ ..?

ಬಿಜೆಪಿ ಪರಿಷತ್ ಟಿಕೆಟ್ ಹಂಚಿಕೆ ವಿಚಾರ ಪಕ್ಷದೊಳಗೆ ಗುಸು ಗುಸುವಿಗೆ ಕಾರಣವಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಸಿಎಂ ಬೊಮ್ಮಾಯಿ (CM BOMMAI) ಪಾತ್ರವೂ ಗೌಣವಾಗಿದೆ. ಮೂಲಗಳ ಪ್ರಕಾರ ದೆಹಲಿಯಲ್ಲಿ ನಡೆದಿದ್ದು ಆರ್ ಎಸ್ ಎಸ್ ಮುಖಂಡ ಸಂತೋಷ್ (SANTHOSH) ಆಟ ಎನ್ನಲಾಗಿದೆ. ವಿಜಯೇಂದ್ರ (VIJAYENDRA) ನಾಗಾಲೋಟಕ್ಕೆ ಸಂತೋಷ್ ಬ್ರೇಕ್ ಹಾಕಿದ್ರು ಎನ್ನಲಾಗ್ತಿದೆ.

ಈಗಾಗಲೇ ಟಿಕೆಟ್ ನೀಡಿರುವ ಕೇಶವ ಪ್ರಸಾದ್ ಗೆ ಯಡಿಯೂರಪ್ಪ ಕಂಡ್ರೆ ಅಷ್ಟಕಷ್ಟೆ. ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್ ಅವರನ್ನು ಯಡಿಯೂರಪ್ಪ ಅವರೇ ಹೊರಹಾಕಿದ್ರು. ಕೇಶವ ಪ್ರಸಾದ್ ಗೆ ಟಿಕೆಟ್ ನೀಡಿರುವುದು ಯಡಿಯೂರಪ್ಪ ಪಾಳಯದ ಅಸಮಾಧಾನಕ್ಕೆ ಕಾರಣವಾಗಿದೆ.ವಿಜಯೇಂದ್ರಗೆ ಟಿಕೆಟ್ ನೀಡಿ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿತ್ತು. ಆದ್ರೆ ಅಂತಿಮ ಕ್ಷಣದಲ್ಲಿ ವಿಜಯೇಂದ್ರ ಟಿಕೆಟ್ ಗೆ ಕತ್ತರಿ ಬಿದ್ದಿದೆ. ಅಷ್ಟೇ ಅಲ್ಲ ಸಚಿವ ಸ್ಥಾನ ಅಲಂಕರಿಸೋ ಕನಸಿಗೂ ಎಳ್ಳು ನೀರು ಬಿಟ್ಟಿದ್ದಾರೆ. ಭವಿಷ್ಯದಲ್ಲಿ ವಿಜಯೇಂದ್ರಗೆ ವಿಧಾನಸಭಾ ಟಿಕೆಟ್ ನೀಡುವ ಸಾಧ್ಯತೆ ಇದೆ. ಆದ್ರೂ ಭವಿಷ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ :- ವಿಜಯೇಂದ್ ಗೆ ಸಿಗದ ಪರಿಷತ್ ಟಿಕೆಟ್ – ಮಾಜಿ ಸಿಎಂ ಬಿಎಸ್ ವೈ ಗೆ ಶಾಕ್
ವಿಜಯೇಂದ್ರಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ

ಈ ನಡುವೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಿ. ವೈ. ವಿಜಯೇಂದ್ರಗೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯೇಂದ್ರಗೆ ಟಿಕೆಟ್ ಕೊಡದಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸಹಜವಾಗಿ ವಿಜಯೇಂದ್ರಗೆ ಭವಿಷ್ಯದಲ್ಲಿ ದೊಡ್ಡ ಅವಕಾಶವನ್ನು ಬಿಜೆಪಿ ಹೈಕಮಾಂಡ್ ಕಲ್ಪಿಸಿ ಕೊಡುವ ಭರವಸೆ ನನಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :- ಅಲ್ಪಾವಧಿಯಲ್ಲೇ ಕ್ವಾಡ್ ಪ್ರಮುಖ ಸ್ಥಾನ ಗಳಿಸಿದ್ದು ಮಾತ್ರವಲ್ಲದೇ ಇಂಡೋ-ಪೆಸಿಫಿಕ್‌ ನಲ್ಲಿ ಶಾಂತಿಯನ್ನು ಖಾತ್ರಿಪಡಿಸಿದೆ – ಮೋದಿ 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!