ಮಹತ್ವದ ನಿರ್ಧಾರವೊಂದರಲ್ಲಿ ಕೇಂದ್ರ ಸರಕಾರ (CENTRAL GOVERNMENT ) ಸ್ಥಳೀಯ ಬೆಲೆ ಏರಿಕೆಯನ್ನು ತಡೆಯುವ ಸಲುವಾಗಿ ಸಕ್ಕರೆ ( SUGAR) ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಿದೆ. ಹೊಸ ನಿರ್ಬಂಧಗಳು ಇದೇ ಜೂನ್ 1 ರಿಂದ ಜಾರಿಗೆ ಬರಲಿದ್ದು, ಅಕ್ಟೋಬರ್ 31ರವರೆಗೆ ಜಾರಿಯಲ್ಲಿರಲಿದೆ.
![](https://rajnewskannada.in/wp-content/uploads/2022/05/WhatsApp-Image-2022-05-25-at-2.58.53-PM.jpeg)
ಜೂನ್ 1 ರಿಂದ ಅಕ್ಟೋಬರ್ 31 ರವರೆಗೆ ಸಾಗರೋತ್ತರ ಸಕ್ಕರೆ ಮಾರಾಟಕ್ಕೆ ಅನುಮತಿ ಪಡೆಯುವಂತೆ ಸರ್ಕಾರವು ವ್ಯಾಪಾರಿಗಳಿಗೆ ಸೂಚಿಸಿದೆ. ಪ್ರಾಥಮಿಕವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆಯನ್ನು ಸುಧಾರಿಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರಕಾರ ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ಸಕ್ಕರೆ ರಫ್ತುಗಳನ್ನು ಜೂನ್ 1, 2022 ರಿಂದ ನಿರ್ಬಂಧಿತ ವರ್ಗದಲ್ಲಿ ಇರಿಸಲಾಗಿದೆ. ಇದನ್ನೂ ಓದಿ :- ವಿಜಯೇಂದ್ರಗೆ ತಪ್ಪಿದ ಟಿಕೆಟ್ – ಬಿಎಸ್ ವೈ ಪುತ್ರನ ನಾಗಾಲೋಟಕ್ಕೆ ಸಂತೋಷ್ ಹಾಕಿದ್ರಾ ಬ್ರೇಕ್ ..?
![](https://rajnewskannada.in/wp-content/uploads/2022/05/image-16.png)
“2021-22 (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಋತುವಿನಲ್ಲಿ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ 100 ಎಲ್ಎಂಟಿ (ಲಕ್ಷ ಮೆಟ್ರಿಕ್ ಟನ್) ವರೆಗಿನ ಸಕ್ಕರೆಯನ್ನು ರಫ್ತು ಮಾಡಲು ಸರ್ಕಾರ ನಿರ್ಧರಿಸಿದೆ,” ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
![](https://rajnewskannada.in/wp-content/uploads/2022/05/image-17.png)
ರಫ್ತು ನಿಷೇಧ ಅಥವಾ ರಫ್ತಿಗೆ ನಿರ್ಬಂಧ ಹೇರಿದರೆ ದೇಶೀಯ ಮಟ್ಟದಲ್ಲಿ ಸಕ್ಕರೆ ಬೆಲೆ ಒಂದಿಷ್ಟು ಇಳಿಕೆಯಾಗಲಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಕಡಿಮೆ ದರ ಸಿಗುವ ಸಾಧ್ಯತೆಯೂ ಇದೆ. ಹೀಗಾಗಿ ಸಕ್ಕರೆ ಬೆಲೆ ಇಳಿಕೆ ಗ್ರಾಹಕರ ಪಾಲಿಗೆ ಶುಭ ಸುದ್ದಿಯಾದರೂ, ಬೆಳೆಗಾರರಿಗೆ ಒಂದಿಷ್ಟು ಕಹಿಯಾಗಲಿದೆ.
ಇದನ್ನೂ ಓದಿ :- ವಿಜಯೇಂದ್ ಗೆ ಸಿಗದ ಪರಿಷತ್ ಟಿಕೆಟ್ – ಮಾಜಿ ಸಿಎಂ ಬಿಎಸ್ ವೈ ಗೆ ಶಾಕ್