ಕುಕ್ಕರ್ ಬಾಂಬ್ ಬ್ಲಾಸ್ಟ್ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ( D.K SHIVKUMAR ) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ( PRAMOD MUTHALIK ) ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಅವರ ಹೇಳಿಕೆ ಖಂಡನೀಯ. ಟೆರರಿಸ್ಟ್ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧ ಎಂದು ಗುಡುಗಿದ್ದಾರೆ.
ಶ್ರೀರಾಮ ಸೇನೆ ( SRI RAMA SENA ) ಸಂಘಟನೆ ಇದನ್ನ ವಿರೋಧ ಮಾಡುತ್ತೆ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ಕೋಡೊದು ಸರಿಯಲ್ಲ. ಟೆರರಿಸ್ಟ್ ಗಳ ಬಗ್ಗೆ ಪುಲ್ವಾಮಾ ಹಾಗೂ ಮುಂಬೈ ದಾಳಿ ಹೇಳಿಕೆ ಸರಿಯಲ್ಲ. ನೂರಾರು ಜನ ಸಾವಾಗಾಬೇಕಾ, ರಕ್ತ ಹರಿಯಬೇಕಾ, ಹೆಣಗಳು ಬಿಳಬೇಕಾ..? ಪೊಲೀಸ್ ಇಲಾಖೆ ಇದನ್ನ ಹಿಡಿದು ಅನಾಹುತ ತಪ್ಪಿಸಿದ್ದಾರೆ. ಅದನ್ನ ಬಿಟ್ಟು ಟೆರರಿಸ್ಟ್ ಪರ ಮಾತನಾಡಿದ್ದು , ವೋಟಿಗಾಗಿ ಹೇಳಿಕೆ ಕೊಟ್ಟಿದ್ದು ದೇಶಕ್ಕೆ ಅಪಾಯಕಾರಿ. ಇದನ್ನ ವಾಪಸ್ ಪಡೆದು ದೇಶಕ್ಕೆ ಕ್ಷಮೆ ಕೇಳಬೇಕು. ದೇಶಕ್ಕೆ ಸುರಕ್ಷತೆ ಮುಖ್ಯ. ನಿಮ್ಮ ರಾಜಕಾರಣ ಅಲ್ಲ. ಸರ್ವನಾಶ ಆಗಿ ಹೋಗ್ತಿರಾ ನೀವು. ನಿಮ್ಮ ಹೇಳಿಕೆ ವಾಪಸ್ ಪಡೆಯದೇ ಇದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ರು.
ಇದನ್ನು ಓದಿ : – ಹೋದಲ್ಲೆಲ್ಲ ಸಿದ್ದರಾಮಯ್ಯ ಅಭ್ಯರ್ಥಿಗಳನ್ನ ಘೋಷಣೆ ಮಾಡುವುದು ಸರಿಯಲ್ಲ – ಸತೀಶ್ ಜಾರಕಿಹೊಳಿ