ವಿಧಾನಸಭೆಯಿಂದ(Vidhanasabha) ವಿಧಾನ ಪರಿಷತ್ತಿಗೆ (Vidhanaparishath) ಆಯ್ಕೆಯಾದ 7 ಸದಸ್ಯರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೆಡಿಎಸ್ ನ ಟಿ. ಎ ಶರವಣ TA.Sharavana) , ಬಿಜೆಪಿಯ (BJP) ಲಕ್ಷಣ ಸವದಿ (Lakshmana savadi) , ಛಲವಾದಿ ನಾರಾಯಣಸ್ವಾಮಿ (Chalavadhi narayanswamy), ಕೇಶವ ಪ್ರಸಾದ್, ಹೇಮಲತಾ, ಕಾಂಗ್ರೆಸ್ ನ ಎಂ ನಾಗರಾಜ್, ಅಬ್ದುಲ್ ಜಬ್ಬಾರ್ (Abdul jabbar) ಸೇರಿದಂತೆ ಏಳು ಜನ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಪ್ರ(Raghunath rao malkapure)ಮಾಣವಚನ ಬೋಧಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವರಾದ ಆರ್ ಅಶೋಕ್ (R.ashok)) , ಕೋಟಾ ಶ್ರೀನಿವಾಸ್ ಪೂಜಾರಿ(Kota srinivas pujari) ಭಾಗಿಯಾಗಿದ್ದಾರೆ. ಅಲ್ಲಾಹು ಹೆಸರಿನಲ್ಲಿ ಅಬ್ದುಲ್ ಜಬ್ಬಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಗವಂತನ ಹೆಸರಿನಲ್ಲಿ ನಾಗರಾಜ್ ಪ್ರಮಾಣ ವಚನ ಸ್ವೀಕರಿಸಿದ್ರೆ, ಬಾಬಾ ಸಾಹೇಬ್ ಅಂಬೇಡ್ಕರ್ (Ambedker) ಹೆಸರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಾಲ್ಮೀಕಿ (Valmiki) ಹೆಸರಿನಲ್ಲಿ ಹೇಮಲತಾ ನಾಯಕ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಕ್ಷ್ಮಣ ಸವದಿ ಶಿರಡಿ ಸಾಯಿಬಾಬ ಹಾಗೂ ತಿರುಪತಿ ವೆಂಕಟೇಶ್ವರ ದೇವರ ಮೇಲೆ ಪ್ರಮಾಣ ಮಾಡಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ : – ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆದರೆ ಅದಕ್ಕೆ ಅವ್ರೇ ಹೊಣೆ- ಸಚಿವ ಕೆ ಸುಧಾಕರ್