ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆ (Griha Lakshmi Yojana) ಜಾರಿ ತರುವ ನೆಪದಲ್ಲಿ ಕುಟುಂಬದ ಮಹಿಳೆಗೆ 2000 ಕೊಡುತ್ತೇವೆ ಎಂದುಕೊಂಡು ಅತ್ತೆಗೂ ಸೊಸೆಗೂ ಬೆಂಕಿ ಹಚ್ಚಿದ್ರು ಎಂದು ಆರ್.ಆಶೋಕ್ (R. Ashok) ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಯಲ್ಲಿ ಕುಟುಂಬದ ಮಹಿಳೆಗೆ 2000 ಕೊಡುತ್ತೇವೆ ಅಂತಾ ಹೇಳಿದ್ರು, ಆದ್ರೆ ಇದೀಗ ಪೊರ್ಟಲ್ ಹ್ಯಾಕ್ ಮಾಡಲಾಗಿದೆ ಅಂತಾ ಆರೋಪ ಮಾಡುತ್ತಿದ್ದಾರೆ. ಯಾರು ಮಾಡಿದ್ದಾರೆ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ಹ್ಯಾಕ್ ಮಾಡಿಸಿದ್ದಾರೆ. ಅಂತೆ, ಒಬ್ಬ ಸಚಿವರು ಹೇಳುತ್ತಾರೆ.
ಐದು ಗ್ಯಾರಂಟಿಗಳು ಗೊಂದಲದ ಗ್ಯಾರಂಟಿಗಳು ಆಗಿವೆ. ಜನರಿಗೆ ಕ್ಲ್ಯಾರಿಟಿಯೇ ಇಲ್ಲ. ಬಸ್ನಲ್ಲಿ ಯಾಕೆ ಒಡಾಡ್ತಾಯಿದ್ದಾರೆ ಅಂದ್ರೆ ಎಲ್ಲಿ ಈ ಯೋಜನೆ ನಿಂತು ಹೋಗುತ್ತದೆ ಅಂತಾ ಅದಕ್ಕೆ ನಾವು ಹೇಳಿದ್ದೇವೆ ಎಲ್ಲ ಬೇಗಾ ಬೇಗಾ ಒಡಾಡಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಜಾರಿ ಮಾಡುತ್ತೇವೆ ಎಂದು ಹೇಳಿದ್ರು. ಐದು ಗ್ಯಾರಂಟಿಗಳನ್ನ ಜಾರಿಗೊಳಿಸದ ಮೇಲೆ ಈ ಸರ್ಕಾರದವರು ಕೂತುಕೊಳ್ಳುವ ಅಧಿಕಾರವಿಲ್ಲ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.