Crime News

ಹನುಮಂತನಗರ ಪೊಲೀಸರಿಂದ ಖತರ್ನಾಕ್ ‘ಚಡ್ಡಿ’ಗ್ಯಾಂಗ್ ಬಂಧನ

ಚಡ್ಡಿ ಹಾಕಿಕೊಂಡು ಬೈಕ್ ಜೊತೆ ಫೀಲ್ಡಿಗೆ ಇಳಿದ್ರೆ ಮುಗೀತು. ಚಿನ್ನದ ಸರ ಕಿತ್ತುಕೊಳ್ಳದೇ ಹೋಗೋದಿಲ್ಲ ಈ ಗ್ಯಾಂಗ್. ಹೀಗೆ ಸರವೇಗದಲ್ಲಿ ಬಂದು ಸರ ಕಿತ್ತು ಪರಾರಿಯಾಗುತ್ತಿದ್ದವರು ಇದೀಗ ಅಂದರ್ ಆಗಿದ್ದಾರೆ.

ಚಡ್ಡಿ ಹಾಕಿಕೊಂಡು ಬೈಕ್ ಜೊತೆ ಫೀಲ್ಡಿಗೆ ಇಳಿದ್ರೆ ಮುಗೀತು. ಚಿನ್ನದ ಸರ ಕಿತ್ತುಕೊಳ್ಳದೇ ಹೋಗೋದಿಲ್ಲ ಈ ಗ್ಯಾಂಗ್. ಹೀಗೆ ಸರವೇಗದಲ್ಲಿ ಬಂದು ಸರ ಕಿತ್ತು ಪರಾರಿಯಾಗುತ್ತಿದ್ದವರು ಇದೀಗ ಅಂದರ್ ಆಗಿದ್ದಾರೆ.

ಹನುಮಂತನಗರ ( HANUMANTHA NAGAR ) ಪೊಲೀಸರಿಂದ ಖತರ್ನಾಕ್ ‘ಚಡ್ಡಿ’ಗ್ಯಾಂಗನ್ನು ಬಂಧಿಸಲಾಗಿದ್ದು, ಸುನೀಲ್ ಕುಮಾರ್ @ ಸ್ನ್ಯಾಚರ್ ಸುನೀಲ್ (37) ಶ್ರೀನಿವಾಸ್ @ ಚಡ್ಡಿ (25) ಬಂಧಿತ ಆರೋಪಿಗಳು. ಗಿರಿನಗರದ ಅಶೋಕನಗರದಲ್ಲಿ ಚೈನ್ ಸ್ನಾಚಿಂಗ್ ಮಾಡಿದ್ದ ಆರೋಪಿಗಳು, 56 ವರ್ಷದ ಸ್ಕೂಲ್ ಟೀಚರ್ ಕತ್ತಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. ಇದನ್ನು ಓದಿ :- KRPP ಪಕ್ಷ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ – ಜನಾರ್ದನ ರೆಡ್ಡಿ

ಜನವರಿ 4ರಂದು ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಹಿಡಿಯಲು ಹನುಮಂತನಗರ ಪೊಲೀಸರು ಪಡಬಾರದ ಪಾಡು ಪಟ್ಟಿದ್ದರು. 15 ದಿನ ನಿರಂತರ ಕಾರ್ಯಾಚರಣೆ ಬಳಿಕ ಪಿಎಸ್ಐ ಸುನೀಲ್ ಕಡ್ಡಿ ಲಾಕ್ ಮಾಡಿದ್ದರು. 2016 ರವರೆಗೆ 8 ವರ್ಷ ಜೈಲಿನಲ್ಲಿದ್ದ ಸುನೀಲ್ ಕುಮಾರ್, ನಂತರ ಜೈಲಿನಿಂದ ಹೊರಬಂದು ಸೈಲೆಂಟ್ ಆಗಿದ್ದ. ಮತ್ತೆ ಈ ಖತರ್ನಕ್ ಆಸಾಮಿ ಸರಗಳ್ಳತನಕ್ಕೆ ಇಳಿದಿದ್ದು, ಬಂಧಿತನಿಂದ ಒಂದೂವರೆ ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಸರ ಜೊತೆಗೆ 12 ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನು ಓದಿ :-  ಕೆಳ ಮನೆಯಲ್ಲಿದ್ದ ವಿವಾಹಿತೆ ಮೇಲಿನ ಮನೆಯಲ್ಲಿದ್ದ ವಿವಾಹಿತನ ಜೊತೆಗೆ ಎಸ್ಕೇಪ್…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!