ಮಂಗಳೂರು: ದೇಶದಲ್ಲಿ ಆಕ್ಸಿಜನ್ ಪೂರೈಕೆ ಸಮಸ್ಥಿತಿಗೆ ತರುವ ಯತ್ನದ ಭಾಗವಾಗಿ ಕೇಂದ್ರ ಸರ್ಕಾರ ಸಮುದ್ರ ಸೇತು-2 ಕಾರ್ಯಾಚರಣೆ ಹಮ್ಮಿಕೊಂಡಿದೆ. ಅದರಂತೆ ಭಾರತದ ನೌಕಾಸೇನಾ ಹಡಗು ಐಎನ್ಎಸ್ ತಲ್ವಾರ್ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಂಗಳೂರು ಬಂದರಿಗೆ ತಂದಿದೆ.
ಈ ಆಮ್ಲಜನಕದ ಟ್ಯಾಂಕ್ನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ಕೇಂದ್ರ ಸರ್ಕಾರ ನವಮಂಗಳೂರು ಬಂದರಿಗೆ ಈಗಾಗಲೇ ಸೂಚನೆ ನೀಡಿದೆ. ಬಹರೈನ್ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್ಗಳಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ.
ಇದರಲ್ಲಿ ಆಕ್ಸಿಜನ್ ಮಾತ್ರವಲ್ಲದೆ ಇತರ ಕೋವಿಡ್ ಚಿಕಿತ್ಸೆ ವೇಳೆ ಅಗತ್ಯವಿರುವ ಮೆಡಿಕಲ್ ಉಪಕರಣಗಳೂ ಇದೆ. ಮಧ್ಯಾಹ್ನ ಸುಮಾರು 2 ಗಂಟೆಗೆ ನವಮಂಗಳೂರು ಬಂದರಿಗೆ ತಲುಪಿದ ಈ ಆಕ್ಸಿಜನ್ ಕರಾವಳಿಯ ಜಿಲ್ಲೆಗಳಲ್ಲೇ ವಿತರಣೆಯಾಗಲಿದೆ.