ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಏಕಕಾಲಕ್ಕೆ ಇದೇ ತಿಂಗಳು 29ರಂದು 50 ಸೆಕೆಂಡುಗಳಲ್ಲಿ 51 ಸಾವಿರ ಸಸಿಗಳನ್ನು ನೆಡುವಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
![](https://rajnewskannada.in/wp-content/uploads/2022/05/01-5.png)
ಈ ಕಾರ್ಯಕ್ರಮವು ಅಗಡಿ ಅಕ್ಕಿಮಠದ ಸ್ವಾಮಿಗಳು ಸಾನಿಧ್ಯದಲ್ಲಿ ಜರುಗಲಿದೆ. ಈ ಸಮಾರಂಭದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಪಾಲ್ಗೊಳ್ಳಲಿದ್ದಾರೆ.ಸದ್ಯ ಅಕ್ಕಿ ಮಠದ ಶ್ರೀಗಳು ರವಿ ಡಿ ಚೆನ್ನನವರ್ ಗೆ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ : – ಕ್ಷಣಾರ್ಧದಲ್ಲಿಯೇ ಪ್ರಾಣಾಪಾಯದಿಂದ ಪಾರಾದ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ
![](https://rajnewskannada.in/wp-content/uploads/2022/05/02-5.png)
ದೇಶವೇ ಹೆಮ್ಮೆಪಡುವ ಕಾರ್ಯಕ್ರಮ ಇದಾಗಿದ್ದು, ನಾನು ಕೂಡ ಇದ್ರಲ್ಲಿ ಸ್ವಯಂ ಸೇವಕನಾಗಿ ಭಾಗಹಿಸುತ್ತೇನೆ.33 ಗ್ರಾಂ.ಪಂ ವ್ಯಾಪ್ತಿಯ 89 ಹಳ್ಳಿಗಳಲ್ಲಿ ಈ ಸಸಿ ನಡುವ ಕಾರ್ಯಕ್ರಮ ಜರುಗಲಿದ್ದು,ಎಲ್ಲರೂ ದೊಡ್ಡವರು,ಸಣ್ಣವರು ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ : – ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ