ಮನೆ ಮೇಲ್ಚಾವಣಿ ಮೇಲೆ ಸಿಮೆಂಟ್ ಇಟ್ಟಿಗೆ ಬಿದ್ದು ಮಗು ದುರ್ಮರಣ ಹೊಂದಿರುವ ಘಟನೆ ದೇವನಹಳ್ಳಿ (Devnahalli) ಪಟ್ಟಣದ ನೀರುಗುಂಟೆಪಾಳ್ಯದಲ್ಲಿ (Nirugunttepalya) ನಡೆದಿದೆ . ಸಾವನ್ನಪಿದ ಮಗುವಿನ ಮನೆಗೆ ಡಿಸಿ ಶ್ರೀನಿವಾಸ್ (Dp . srinivas) ಮತ್ತು ಶಾಸಕ ನಿಸರ್ಗ ನಾರಾಯಣಸ್ವಾಮಿ (Nisarga narayanaswamy)ಭೇಟಿ ನೀಡಿದರು .
ಮನೆಯಲ್ಲಿ ಮುರಿದು ಬಿದ್ದ ಶೀಟ್ ನ್ನು ಪರಿಶೀಲಿಸಿದರು . ಮೃತ ಮಗುವಿನ ತಂದೆ ತಾಯಿಗೆ 5 ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಿದರು. ಕಳೆದ ರಾತ್ರಿ ಬಿರುಗಾಳಿ ಸಹಿತ ಮಳೆಗೆ ಅವಘಡ ನಡೆದಿದೆ . ಪಕ್ಕದ ಮನೆ ಮೇಲ್ಚಾವಣಿ ಮೇಲೆ ಇಟ್ಟಿದ್ದ ಇಟ್ಟಿಗೆ ಪಕ್ಕದ ಮನೆ ಶೀಟ್ ಮೇಲೆ ಬಿದ್ದಿತ್ತು . ಹೀಗಾಗಿ ಮನೆಯಲ್ಲಿದ್ದ 9 ತಿಂಗಳ ಮಗು ತಲೆ ಮೇಲೆ ಬಿದ್ದು ದುರ್ಘಟನೆ ನಡೆದಿದೆ . ಮಗುವನ್ನ ಕಳೆದುಕೊಂಡು ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ . ಇದನ್ನೂ ಓದಿ : – ಕಾಂಗ್ರೆಸ್ ನವ್ರ ಬುದ್ಧಿ ಭ್ರಮಣೆ ಆಗಿದೆ – ಅರುಣ್ ಸಿಂಗ್