ಸಿದ್ದರಾಮಯ್ಯ ಗೆ ತಿಕ್ಕಲು ಜಾಸ್ತಿ ಆಗಿದೆ. ರಾಜಕೀಯ ತಿಕ್ಕಲು ಹಿಡಿದಿದೆ. ಇದಕ್ಕೆ ಚಿಕಿತ್ಸೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಎಮ್.ಎಲ್. ಸಿ ಚಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
![](https://rajnewskannada.in/wp-content/uploads/2022/06/image-54-1024x683.png)
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಗೆ ಆರ್ಥಿಕ ಲೆಕ್ಕಾಚಾರ ಗೊತ್ತಿಲ್ಲ. ಬಜೆಟ್ ನ ಅಂತರಾಳವೇ ಗೊತ್ತಿಲ್ಲ ಅವ್ರಿಗೆ. ಸಿದ್ದರಾಮಯ್ಯಗೆ ಗೊತ್ತಿರೋದು ಚಡ್ಡಿ ಮಾತ್ರ. ಚಡ್ಡಿ ಸುಡ್ತೀವಿ ಅಂತಿದಾರೆ ಈಗ. ಚಾಮುಂಡೇಶ್ವರಿ ಕ್ಷೇತ್ರದ ಜನ ಅವರ ಲುಂಗಿ, ಚಡ್ಡಿ ಕಿತ್ತು ಕಳಿಸಿದ್ರು.
![](https://rajnewskannada.in/wp-content/uploads/2022/06/image-53.png)
ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ಚಡ್ಡಿಗಳನ್ನ ಸಪ್ಲೈ ಮಾಡುತ್ತೇವೆ. ಇದನ್ನ ಸುಡುವ ಮೊದಲು ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – ಆರ್ ಎಸ್ ಎಸ್ ಕಳೆದ 75 ವರ್ಷಗಳಿಂದ ಜನಸೇವೆ ಮಾಡ್ತಿದೆ – ಸಿಎಂ ಬೊಮ್ಮಾಯಿ