ಕೊರೊನಾ ವೈರಸ್ ನಿಂದ ಚಿಂತಾಜನಕ ಸ್ಥಿತಿ ತಲುಪಿದ್ದ ಬೆಂಗಳೂರಿನ 93 ವರ್ಷದ ವೃದ್ಧರೊಬ್ಬರು ಕೊರೊನಾ ವಿರುದ್ಧ ಹೋರಾಟದಲ್ಲಿ ಗೆದ್ದು ಬಂದು ಸ್ಫೂರ್ತಿಯಾಗಿದ್ದಾರೆ.
ದೀಪಾಂಜಲಿ ನಗರದ ಡಿ. ನರಸಿಂಹಾಚಾರ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದಾರೆ.
ಏಪ್ರಿಲ್ 29ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನರಸಿಂಹಾಚಾರ್ ಕೊರೊನಾ ಸೋಂಕಿನಿಂದ ಚಿಂತಾಜನಕ ಸ್ಥಿತಿಯಲ್ಲಿದ್ದರು. ಯುವಕರೇ ಕೊರೊನಾ ಎದುರಿಸಲಾಗದೇ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಇವರು ಬದುಕಿ ಬರುವುದೇ ಅನುಮಾನ ಎಂದು ಭಾವಿಸಲಾಗಿತ್ತು.
ಸುದೀರ್ಘ ಹೋರಾಟದ ನಂತರ ಗೆದ್ದು ಬಂದಿರುವ ನರಸಿಂಹಚಾರ್ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಧೈರ್ಯ ಕಳೆದುಕೊಳ್ಳದೇ ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಅವರು ಸಲಹೆ ನೀಡಿದ್ದಾರೆ.