ಸೆಲ್ಫಿ ತೆಗೆಯುತ್ತಿದ್ದಾಗ ಕಾಲು ಜಾರಿ ಮಹಿಳೆ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ನಂಜನಗೂಡಿನ ಕಪಿಲಾ ನದಿಯ ಸಂಗಮದಲ್ಲಿ ನಡಿದಿದೆ. ಮೃತ ಮಹಿಳೆಯನ್ನು ಕವಿತಾ( 38 ) ಎಂದು ಗುರುತಿಸಲಾಗಿದೆ.
![](https://rajnewskannada.in/wp-content/uploads/2022/05/kavitha.png)
ಕವಿತಾ ಮತ್ತು ಪತಿ ಗಿರೀಶ್ ಹಾಗೂ ಪುತ್ರಿಯ ಜತೆಗೂಡಿ ಯಾತ್ರಾಸ್ಥಳಕ್ಕೆ ಹೋಗಿದ್ದರು. ಕಾಲು ತೊಳೆದು ನೀರು ಸೇವಿಸಿದ ಬಳಿಕ ಮೊಬೈಲ್ ಫೋನ್ನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಕವಿತಾ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಸಮೀಪದಲ್ಲೇ ಇದ್ದ ಪತಿ ಗಿರೀಶ್ ಮತ್ತು ಪುತ್ರಿಯ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವತಿಯ ಶವವನ್ನು ಕಪಿಲಾ ನದಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂಓದಿ :- ನಮ್ಮ ಸಿದ್ದಾಂತ ನಂಬಿ ಯಾರು ಪಕ್ಷಕ್ಕೆ ಬರ್ತಾರೋ ಅವ್ರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ – ಬೊಮ್ಮಾಯಿ