ಬೆಳೆ ಸಾಲ ಮರುಪಾವತಿಗೆ ರೈತರಿಗೆ ಬ್ಯಾಂಕ್ ಗಳು ನೋಟೀಸ್ ನೀಡಿದೆ . ಅತಿವೃಷ್ಟಿಗೆ ಬೆಳೆ ಕಳೆದುಕೊಂಡ ಅನ್ನದಾತರಿಗೆ ಇದೀಗ ಬ್ಯಾಂಕ್ ನೋಟೀಸ್ನಿಂದ ಆತಂಕವಾಗಿದೆ .
ಜಮೀನು ಹರಾಜು ಹಾಕುವ ಮೌಖಿಕ ನೋಟೀಸ್ಗಳನ್ನೂ ರಾಷ್ಟ್ರೀಕೃತ ಬ್ಯಾಂಕುಗಳು ಜಾರಿ ಮಾಡ್ತಿವೆ . ಕೃಷಿಗಾಗಿ ರೈತರು ಮಾಡಿದ ಸಾಲ ಮರುಪಾವತಿಗಾಗಿ ನೋಟೀಸ್ ಜೊತೆಗೆ ಕಿರುಕುಳದ ಆರೋಪ . ಕೊನೆಯ ಹಂತದ ಕಾನೂನು ಕ್ರಮ ಜರುಗಿಸುವುದಾಗಿ ಬ್ಯಾಂಕ್ನಿಂದ ರೈತರಿಗೆ ನೋಟೀಸ್. ಹೊಸಪೇಟೆ , ಹಗರಿಬೊಮ್ಮನಹಳ್ಳಿ , ಕೊಟ್ಟೂರು ತಾಲೂಕಿನ ನೂರಾರು ರೈತರಿಗೆ ನೋಟೀಸ್ ಜಾರಿಯಾಗಿದೆ . ಕಾರ್ಪೋರೇಷನ್ ಬ್ಯಾಂಕ್ನಿಂದ ಕೆಲವು ರೈತರಿಗೆ ನೋಟೀಸ್ ಜಾರಿಯಾಗಿದೆ.
![](https://rajnewskannada.in/wp-content/uploads/2022/05/WhatsApp-Image-2022-05-22-at-7.31.37-AM1-851x1024.jpeg)
ಆದರೆ ಸಾಲ ಮರುಪಾವತಿ ಮಾಡಬೇಕು ಇಲ್ಲವಾದ್ರೆ ಆಸ್ತಿ ಜಪ್ತಿ ಮಾಡುತ್ತೇವೆಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ನೋಟೀಸ್ ನೀಡಿದೆ . ಕಳೆದ ವರ್ಷವೂ ಅಕಾಲಿಕ ಮಳೆ ಬೆಳೆ ನಾಶವಾಗಿತ್ತು. ಹೀಗಾಗಿ ಅಸಲು ,ಬಡ್ಡಿ ಮರುಪಾವತಿ ಸಾಧ್ಯ ಆಗ್ತಿಲ್ಲ. ಚಕ್ರ ಬಡ್ಡಿ ರೂಪದಲ್ಲಿ ಸಾಲ ದುಪ್ಪಟ್ಟಾಗಿದೆ ಅಂತಾ ಅನ್ನದಾತರು ಕಂಗಾಲಾಗಿದ್ದಾರೆ . ಇದೀಗ ಅನ್ನದಾತರ ಸಂಕಷ್ಟ ಆಲಿಸದೆ ಸಾಲ ಮರುಪಾವತಿಗೆ ಬ್ಯಾಂಕ್ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ . ಕಷ್ಟದ ಪರಿಸ್ಥಿತಿಯಲ್ಲೂ ಸಾಲ ಮರುಪಾವತಿ ಮಾಡ್ತೇವೆ ಆದ್ರೆ ಬಡ್ಡಿ ವಿನಾಯ್ತಿಗೆ ರೈತರ ಮನವಿ. 300 ಕ್ಕೂ ಹೆಚ್ಚು ರೈತರಿಗೆ ಅಂತಿಮ ಹಂತದ ನೋಟೀಸ್ ಜಾರಿಯಾಗಿದೆ . ವಿಜಯನಗರದ ಅನ್ನದಾತರು ಈಗ ಡಿಸಿಯ ಮೊರೆ ಹೋಗಿದ್ದಾರೆ . ಇದನ್ನೂ ಓದಿ : – ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ!