ಕುವೆಂಪು (Kuvempu), ಬಸವಣ್ಣ (Basavanna) ಅವರನ್ನ ಅವಮಾನ ಮಾಡಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ ಎಂದು ಯೂತ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ (Raksh ramayya) ಹೇಳಿದ್ದಾರೆ .
![](https://rajnewskannada.in/wp-content/uploads/2022/06/Capture-1-8.png)
ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು ಈ ಒಂದು ಪ್ರತಿಭಟನೆಯನ್ನ ಬೇರೊಂದು ರಾಜಕೀಯ ಆ್ಯಂಗಲ್ ಕೊಟ್ಟು 24 ವಿದ್ಯಾರ್ಥಿಗಳನ್ನ ಬಂಧಿಸಿದ್ದಾರೆ. ಮೊದಲ ಸಲ ಎಂಟು ಜನ, ನಂತರ 15 ಜನ ಸೇರಿ 24 ಜನರನ್ನ ಬಂಧಿಸಿದ್ದಾರೆ. ಐದು ದಿನದ ನಂತರ ಇಂದು ಕೇಸು ದಾಖಲು ಮಾಡಿದ್ದಾರೆ. ಹಲ್ಲೆ ಮಾಡಿದವರು ಎಬಿವಿಪಿಯವರು ಅವರ ಮೇಲೂ ಇದೇ ತರಹ ಕೇಸ್ ಗಳನ್ನು ಹಾಕ್ತಾರಾ..? ಎಂದು ಪ್ರಶ್ನಿಸಿದ್ದಾರೆ . ಈ ಒಂದೇ ವಾರದಲ್ಲಿ ನಮ್ಮ ಅಮಾಯಕ ವಿದ್ಯಾರ್ಥಿಗಳನ್ನ ರಿಲೀಸ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೊನ್ನೆಯಿಂದಲೇ ಎಲ್ಲಾ ವೀಡಿಯೋಗಳು ಸಿಕ್ಕಿವೆ.
![](https://rajnewskannada.in/wp-content/uploads/2022/06/Capture-2-5.png)
ನಾವು ಪ್ರಶ್ನೆ ಮಾಡಿದ್ದೇವೆ. ಎಲ್ಲಾ ಫಾಲ್ಸ್ ಆಗಿ ಪ್ರೂ ಮಾಡಲಿಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಕಡೆಗೂ ಅದು ಹೊಲ್ಡ್ ಆಗಲಿಲ್ಲ. ಚೇರ್ ನಲ್ಲಿ ಹೊಡೆದವರ ಮೇಲೂ ಕೇಸ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.ಆರ್ ಎಸ್ ಎಸ್ ಚೆಡ್ಡಿಗೆ ಬೆಂಕಿ ಹಚ್ಚಿದ ವಿಚಾರ.ಆರ್ ಎಸ್ ಎಸ್ ಚೆಡ್ಡಿಗೂ ಇದಕ್ಕೂ ಏನ್ ಸಂಬಂಧ ಇದೆ ಇವಾಗ. ಅವರು ಚೆಡ್ಡಿಗೆ ಬೆಂಕಿ ಹಚ್ಚೋಕೆ ಟ್ರೈ ಮಾಡಿದ್ದು, ಇಲ್ಲಿ ಕೇಸ್ ಹಾಕಿರುವುದೆ ಬೇರೆ. ಮನೆ ಸುಟ್ಟಿರುವ ಹಾಗೆ ಕೇಸ್ ಹಾಕ್ತಾರಲ್ಲ. ಅದು ಆರ್ ಎಸ್ ಎಸ್ನ ಚೆಡ್ಡಿ ಅಲ್ವೇ ಅಲ್ವಾಲ್ಲ ಎಂದು ರಕ್ಷಾ ರಾಮಯ್ಯ ತಿಳಿಸಿದ್ದಾರೆ . ಇದನ್ನೂ ಓದಿ : – ನಮ್ಮ ಮೂರನೇ ಅಭ್ಯರ್ಥಿ ಗೆಲುವಿಗೆ ಎರಡನೇ ಪ್ರಾಶಸ್ತ್ಯದ ಮತಗಳೇ ಸಾಕು – ಬಿಎಸ್ ವೈ