ಹೊರಟ್ಟಿ ( BASAVARAJ HORATTI ) ಸಾಹೇಬ್ರು 45 ವರ್ಷದಿಂದ ವಿಧಾನಪರಿಷತ್ ಸದಸ್ಯರಾಗಿ ಸಭಾಪತಿಗಳಾಗಿ, ಮಂತ್ರಿಗಳಾಗಿ, ಅಪಾರವಾದ ಅನುಭವ ಇರುವ ಒಬ್ಬ ಹಿರಿಯ ನಾಯಕ ಎಂದು ಸಿಎಂ ಬೊಮ್ಮಾಯಿ ( BASAVARAJ BOMMAI ) ಹೇಳಿದ್ದಾರೆ .
![](https://rajnewskannada.in/wp-content/uploads/2022/05/WhatsApp-Image-2022-05-18-at-10.02.04-AM-1024x682.jpeg)
ಆರ್. ಟಿ. ನಗರದ ತಮ್ಮ ನಿವಾಸದ ಬಳಿ ಮಾತಾಡಿದ ಸಿಎಂ ಅವರು ತಮ್ಮದೇ ಆದ ಶಕ್ತಿಯನ್ನ ಹೊಂದಿದ್ದಾರೆ . ವಿಶೇಷವಾಗಿ ಕಾಲೇಜು, ಹೈಸ್ಕೂಲ್ ಶಿಕ್ಷಕರ ಸಂಘಟನೆ ಮಾಡಿ ಅವರ ಸಮಸ್ಯೆಯನ್ನ ನಿರಂತರ ಬಗೆಹರಿಸಿಕೊಂಡು ಬಂದವರು. ಅವ್ರು ಅಧಿಕೃತವಾಗಿ ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಇದನ್ನೂ ಓದಿ :- ಹಿಜಾಬ್ ಯಾರು ಪ್ರಾರಂಭ ಮಾಡಿದ್ದು ಅನ್ನೋದು ಜಗತ್ತಿಗೆ ಗೊತ್ತಿದೆ – ಬೊಮ್ಮಾಯಿ
![](https://rajnewskannada.in/wp-content/uploads/2022/05/WhatsApp-Image-2022-05-18-at-10.02.02-AM-2-1024x682.jpeg)
ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಹೊರಟ್ಟಿ ಪಕ್ಷಕ್ಕೆ ಬರೋದ್ರಿಂದ ಪಕ್ಷಕ್ಕೆ ಆನೆ ಬಲ ಬಂದಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಶಕ್ತಿ ಬಂದಿದೆ. ಹೊರಟ್ಟಿಯವರಿಗೆ ಎಲ್ಲಾ ಅವಕಾಶ ಮಾಡಿಕೊಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ರು.
ಇದನ್ನೂ ಓದಿ : – ರಾಜಕಾಲುವೆ ಒತ್ತುವರಿಯಿಂದ ಮಳೆ ಅನಾಹುತ, ಮನೆಯೊಳಗೆ ನೀರು ನುಗ್ಗಿ ಹಾನಿಯಾದವರಿಗೆ 25 ಸಾವಿರ ರೂ ಪರಿಹಾರ – ಸಿಎಂ ಘೋಷಣೆ