ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ ರೈತರ ಹೊಲಗಳಿಗೆ ಕರಡಿಗಳು ನುಗ್ಗಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನೆಲ್ಲ ನಾಶಮಾಡುತ್ತಿವೆ. ರಾತ್ರಿ ಎನ್ನದೇ ಕರಡಿಗಳ ಕಾಟದಿಂದ ಹೈರಾಣಾದ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗಳ ಸಂರಕ್ಷಣೆಗಾಗಿ ಹರಸಾಹಸ ಪಡುವಂತಾಗಿದೆ.
![](https://rajnewskannada.in/wp-content/uploads/2022/05/04-05-22....png)
ಕರಡಿಗಳನ್ನು ಕಂಡರೆ ಸಾಕು, ಗಲಾಟೆ ಮಾಡಿ ಓಡಿಸಬೇಕು ಎನಿಸುತ್ತದೆ. ಜೀವದ ಹಂಗು ತೊರೆದು ಕರಡಿಗಳನ್ನು ಓಡಿಸಿ, ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳೋ ಪರಿಸ್ಥಿತಿ ಎದುರಾಗಿದೆ. ಕರಡಿಗಳೆಂದರೆ ಭಯ ಸ್ವಲ್ಪ ಯಾಮಾರಿದ್ರೂ ಕರಡಿಗಳು ರೈತರ ಮೇಲೆ ತಿರುಗಿ ಬೀಳುತ್ತವೆ.
![](https://rajnewskannada.in/wp-content/uploads/2022/05/04-05-22.png)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ, ಕರಡಿಹಳ್ಳಿ, ಕಡೆಕೋಳ, ಮಾಕನಡಕ, ಗುಂಡುಮುಣುಗು, ಕುರಿಹಟ್ಟಿ ಈ ಗ್ರಾಮಗಳಲ್ಲಿ ರೈತರಿಗೆ ಕರಡಿಗಳಿಂದ ಫಜೀತಿ ಉಂಟಾಗಿದೆ. ಕರಡಿ ಧಾಮ ಪಕ್ಕದಲ್ಲೇ ಇರುವುದರಿಂದ ಕರಡಿಗಳು ರೈತರ ಜಮೀನುಗಳಿಗೆ ಲಗ್ಗೆ ಇಡುತವೆ , ರೈತರು ಸಿಳ್ಳೆ, ಕೇಕೆ ಹಾಕಿ ಜೀವ ಭಯದಿಂದ ಕರಡಿಗಳನ್ನು ಓಡಿಸಬೇಕಾಗಿದೆ. ಇದನ್ನೂ ಓದಿ :-ಟಾಟಾ ಏಸಿಗೆ ದ್ವಿಚಕ್ರ ವಾಹನ ಡಿಕ್ಕಿ – ಸ್ಧಳದಲ್ಲೇ ಇಬ್ಬರು ಸಾವು