ಬೊಮ್ಮಾಯಿಯನ್ನ ನಂಬಿ ಮೋಸ ಹೋಗ್ತಿದೀವಿ – ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ

ಮೀಸಲಾತಿ ವಿಚಾರ ಕುರಿತಂತೆ ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ (Jayamrutyunjaya swamiji) ಗಡುವು ನೀಡಿದ್ದಾರೆ .ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ.

ಕನಿಷ್ಟ 25ರಿಂದ 30 ಸಾವಿರ ಜನ ಶಿಗ್ಗಾವಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಜಯಮೃತ್ಯುಂಜಯ ಹೇಳಿದ್ದಾರೆ . ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ಶಿಗ್ಗಾಂವಿಗೆ ಬಂದ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ರಿ . ಅದರ ಋಣ ನಿಮ್ಮ ಮೇಲೆ ಇದೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ . ಅಂತಿಮ ಸುತ್ತಿನ ಮಾತುಕತೆಗೆ ನಮ್ಮನ್ನು ಕರೆಯಬೇಕು .ತಮ್ಮ ನಿಲುವು ಹೇಳದೆ ಇದ್ದರೆ ಪಂಚಮಸಾಲಿಗಳ ಜೊತೆ ಸೇರಿ ಹೋರಾಟ ಶುರು ಮಾಡುತ್ತೇವೆ. ಕೊನೆ ನಿರ್ಣಯ ಅಂದೇ ಹೇಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ರು.
ಜೂನ್ 27 ರಂದು .ಹಾವೇರಿ ಜಿಲ್ಲೆಯಲ್ಲಿರುವ ಮನೆ ಎದುರು ಸತ್ಯಾಗ್ರಹ ಮಾಡುತ್ತೇವೆ . ಯಡಿಯೂರಪ್ಪನವರನ್ನು (Yediyurappa) ಈ ಸಮಾಜ ನಂಬಿತ್ತು . ಬೇಡಿಕೆ ಈಡೇರಿಸುವಷ್ಟರಲ್ಲಿ ಅವ್ರು ನಿರ್ಗಮಿತರಾದ್ರು. ಆದ್ರೆ ಈಗ ಬೊಮ್ಮಾಯಿಯನ್ನ (Bommai) ನಂಬಿ ಮತ್ತೆ ಮೋಸ ಹೋಗ್ತಿದೀವಿ .ಬೊಮ್ಮಾಯಿ ಅನೇಕ ಸಭೆಗಳಲ್ಲಿ ಮಾತನಾಡಿದ್ರು .ಮೂರು ಬಾರಿ ಮಾತು ಕೊಟ್ಟು ಈಗ ಮಾತು ತಪ್ಪಿಸಿಕೊಂಡಿದ್ದಾರೆ.ಬಜೆಟ್ ಅಧಿವೇಶನ ಅಷ್ಟರಲ್ಲಿ ನಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದಿದ್ರು .ಆದ್ರೆ ಅದು ಕೂಡಾ ನೆರವೇರಿಲ್ಲ .ಇದರಿಂದ ಮಾತು ತಪ್ಪಿದ ಬೊಮ್ಮಾಯಿ ಗೆ ಅಂತಿಮವಾದ ಪತ್ರ ಬರೆಯುತ್ತಿದ್ದೇವೆ .ಇಡೀ ನಮ್ಮ ಹೋರಾಟದ ಕುರಿತು ಪತ್ರ ಬರೆಯುತ್ತಿದ್ದೇವೆ .ನಮ್ಮ ಜೊತೆಗೆ ಅಂತಿಮ ಮಾತುಕತೆಯನ್ನು ಮಾಡಬೇಕು .27 ರ ಒಳಗೆ ಅವ್ರ ಅಂತಿಮ ನಿರ್ಧಾರ ಹೇಳಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮಲ್ಲೇ ಹಿತಶತ್ರುಗಳು ಇದ್ದಾರೆ
ಮೀಸಲಾತಿ ಬೇಡ ಅಂತ ನಮ್ಮವರೇ ಒಬ್ರು ಸಿಎಂ ಕಿವಿ ಚುಚ್ಚುತ್ತಿದ್ದಾರೆ .ನಾವು ಮೀಸಲಾತಿ ಬೇಕು ಅಂದ್ರೆ, ನಮ್ಮವರೇ ಇಬ್ರು ಮೀಸಲಾತಿ ಬೇಡ ಅಂತಾರೆ .ಉತ್ತರ ಕರ್ನಾಟಕದಲ್ಲಿ ಒಬ್ರು ಹಿತಶತ್ರು ಇದ್ದಾರೆ .ದಕ್ಷಿಣ ಕರ್ನಾಟಕದಲ್ಲಿ ಒಬ್ರು ಹಿತಶತ್ರು ಇದ್ದಾರೆ .ಕೆಲ ನಮ್ಮ ಸಮುದಾಯದ ರಾಜಕೀಯ ನಾಯಕರೇ ನಮಗೆ ಶತ್ರುಗಳಾಗಿದ್ದಾರೆ ಎಂದು ಕಿಡಿಕಾರಿದ್ದಾರೆ . ಇದನ್ನು ಓದಿ :-  ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ – ಸಿಎಂ ಬೊಮ್ಮಾಯಿ

ಪಠ್ಯಪುಸ್ಯಕದಲ್ಲಿ ಬಸವಣ್ಣನವರ ಪಾಠ ಕೈಬಿಟ್ಟ ವಿಚಾರ
ಬಸವಣ್ಣನವರಿಗೆ (Basavanna) ಅಗೌರವ ಆಗಿದೆ. ಇದರ ಪರಿಣಾಮವನ್ನ ಮುಂದೆ ಬೊಮ್ಮಾಯಿ ಅನುಭವಿಸಬೇಕಾಗುತ್ತದೆ .ಜಾಣ ನಡೆಯನ್ನ ಬೊಮ್ಮಾಯಿ ಅನುಸರಿಸಿದ್ದಾರೆ . ಅಧಿಕಾರ ಮುಖ್ಯವಲ್ಲ ಬೊಮ್ಮಾಯಿಯವ ರೇ ಬಸವಣ್ಣ ಮುಖ್ಯ. ಕೆಲವರು ನಿಮಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡ್ತಿದ್ದಾರೆ .ಮಕ್ಕಳ ಎಳೆಯ ಮನಸ್ಸಿನಲ್ಲಿ ಇದನ್ನೆಲ್ಲಾ ತುರುಕುವುದು ಬೇಡ. ಸಾಣೆಹಳ್ಳಿ ಶ್ರೀ, ಸಿದ್ದಗಂಗಾ ಶ್ರೀ (Sidaganga) ಈಗಾಗಲೇ ಧ್ವನಿ ಎತ್ತಿದ್ದಾರೆ .ಅವರ ಜೊತೆಯೇ ಮಾತುಕತೆ ನಡೆಸ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಇದನ್ನೂ ಓದಿ : – ಮೈಸೂರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದು ಇವನಾ..? -ಸಂಸದ ಪ್ರತಾಪ್ ಸಿಂಹ ವಿರುದ್ದ ಗುಡುಗಿದ ಸಿದ್ದರಾಮಯ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!