ಕೇಂದ್ರ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ( DINESH GUNDURAO) ಟ್ವೀಟ್ ಮಾಡಿದ್ದಾರೆ. ಕೋವಿಡ್ ನಲ್ಲಿ ಸಾವಿನ ಸುಳ್ಳು ಲೆಕ್ಕ ಕೊಟ್ಟು ಜಗತ್ತಿನ ಕಣ್ಣಿಗೆ ಕೇಂದ್ರ ಸರ್ಕಾರ ಮಣ್ಣೆರೆಚಿದೆ.
WHO ವರದಿಯಿಂದ ಕೇಂದ್ರದ ಸುಳ್ಳಿನ ಬಂಡವಾಳ ಬಯಲಾಗಿದೆ. ಕೋವಿಡ್ ನಲ್ಲಿ 47 ಲಕ್ಷ ಜನ ಮೃತರಾಗಿದ್ದಾರೆ. ಆದರೆ ಕೇಂದ್ರ ೪.೮ ಲಕ್ಷ ಎಂದು ಸುಳ್ಳು ಹೇಳಿ ದಾರಿ ತಪ್ಪಿಸಿತ್ತು . ೨ ನೆ ಅಲೆಯಲ್ಲಿ ಭಾರತ ಸಾವಿನ ಮನೆಯಾಗಿತ್ತು. ಗಂಗೆಯಲ್ಲಿ ಶವಗಳು ತೇಲಿದ್ದವು. ಆಕ್ಸಿಜನ್ ಇಲ್ಲದೆ ಸಾಲು ಸಾಲು ಹೆಣ ಬಿದ್ದಿದ್ದವು. ಜನರು ದೀಪದ ಹುಳುಗಳಂತೆ ಸಾಯುತ್ತಿದ್ದರು.
ಮೋದಿ ಕೊರೊನಾ ಗೆದ್ದಿದ್ದೇವೆಂದು ಬಿಟ್ಟಿ ಪ್ರಚಾರ ಮಾಡಿದರು. ಈ ಮೂಲಕ ಸಾವಿನ ಲೆಕ್ಕವನ್ನು ಮರೆಮಾಚಿದ್ರು. ಈಗ WHO ವರದಿ ಸರ್ಕಾರದ ಸತ್ಯ ದರ್ಶನ ಮಾಡಿಸಿದೆ. ಸತ್ತವರ ಶಾಪ ಸರ್ಕಾರಕ್ಕೆ ತಟ್ಟದೆ ಇರಲಾರದು ಸುಳ್ಳು ಹೇಳಿ ಸತ್ಯ ಮುಚ್ಚಿಡೋಕೆ ಸಾಧ್ಯವಿಲ್ಲ. ೪೭ ಲಕ್ಷ ಜನರ ಸಾವಿಗೆ ಕೇಂದ್ರವೇ ಹೊಣೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ :- ಕೊಟ್ರೆ ಸನ್ಮಾನ ಮಾಡುತ್ತೇವೆ ಕೊಡದೇ ಇದ್ರೆ ಹೋರಾಟ ಮಾಡುತ್ತೇವೆ – ಬಸನಗೌಡ ಪಾಟೀಲ್ ಯತ್ನಾಳ್