ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾಡು ಹಗಲೇ ಮಗು ಕಳ್ಳತನವಾಗಿದೆ. 40 ದಿನದ ಹಸುಗೂಸನ್ನ ತಾಯಿಯ ಕೈಯಲ್ಲಿದ್ದಾಗಲೇ ಕದ್ದೊಯ್ದಿದ್ದಾರೆ.
![](https://rajnewskannada.in/wp-content/uploads/2022/06/ubali.png)
ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಎಂಬುವವರ ಹಸುಗೂಸು. ಕುಂದಗೋಳದ ನೆಹರೂ ನಗರದ ಮಹಿಳೆ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಕಿಮ್ಸ್ ಗೆ ಮಗುವನ್ನ ದಾಖಲಿಸಿದ್ದರು. ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಕಿಮ್ಸ್ ಗೆ ದಾಖಲು ಮಾಡಲು ವೈದ್ಯರು ಹೇಳಿದ್ದರು.
![](https://rajnewskannada.in/wp-content/uploads/2022/06/hubali-1.png)
ಮಗುವಿನ ಪಾಲಕರು ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಕಿಮ್ಸ್ ಗೆ ದಾಖಲು ಮಾಡಿದ್ದರು. ಇಂದು ಮದ್ಯಾಹ್ನ ಏಕಾಏಕಿ ತಾಯಿಯ ಕೈಯಲ್ಲಿದ್ದ ಮಗುವನ್ನು ಕದ್ದೊಯ್ದಿರೋದಾಗಿ ಪಾಲಕರು ಆರೋಪಿಸಿದ್ದಾರೆ.
ಇದನ್ನೂ ಓದಿ : – ಒಂದೂವರೆ ವರ್ಷದಲ್ಲಿ ಜಗತ್ತು ಕೋವಿಡ್ ಮುಕ್ತ – ಭವಿಷ್ಯ ನುಡಿದ ಕೋಡಿಹಳ್ಳಿ ಸ್ವಾಮೀಜಿ