ಧಾರವಾಡದ ಕೆಸಿಡಿ ಕಾಲೇಜಿಗೆ ಸಿನಿಮಾ ಪ್ರಮೋಷನ್ ಗಾಗಿ ಇಂದು ತ್ರಿವಿಕ್ರಮ ಚಿತ್ರ ತಂಡ ಭೇಟಿ ನೀಡಿತು. ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಚಿತ್ರದ ಪ್ರಮೋಷನ್ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ನಡೆಯಿತು. ಚಿತ್ರತಂಡ ಅದ್ದೂರಿಯಾಗಿ ಸಿನಿಮಾ ಪ್ರಮೋಷನ್ ಮಾಡಿದ್ರು.
![](https://rajnewskannada.in/wp-content/uploads/2022/06/001-9.png)
ಸಹನ ಮೂರ್ತಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಮೊಟ್ಟ ಮೊದಲ ಬಾರಿಗೆ ನಾಯಕನಾಗಿ ನಟಿಸಿರೋ ವಿಕ್ರಮ್ ರವಿಚಂದ್ರನ್ ಗೆ ನಾಯಕಿ ನಟಿಯಾಗಿ ಆಕಾಂಕ್ಷಾ ಶರ್ಮಾ ನಟಿಸಿದ್ದಾರೆ. ಇನ್ನು ಚಿತ್ರತಂಡವನ್ನ ಬರಮಾಡಿಕೊಂಡ ಕೆಸಿಡಿ ಕಾಲೇಜಿನ ಯುವಕ ಯುವತಿಯರು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ರು. ಇದನ್ನೂ ಓದಿ : – TYSON – ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಜೊತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್
![](https://rajnewskannada.in/wp-content/uploads/2022/06/002-5.png)
ಅಲ್ಲದೆ ವಿದ್ಯಾರ್ಥಿಗಳನ್ನ ಕಂಡ ವಿಕ್ರಮ ಸ್ಟೆಪ್ಸ್ ಹಾಕಿ ಎಲ್ಲರನ್ನ ಖುಷಿಪಡಿಸಿದ್ರು. ಇದೆ ತಿಂಗಳ 24ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು ಎಲ್ಲರೂ ಹಾರೈಸಬೇಕು ಅಂತ ಇಡೀ ಚಿತ್ರತಂಡ ಕೇಳಿ ಕೊಂಡಿತು.
ಇದನ್ನೂ ಓದಿ : – ಹಾಟ್ ಫೋಟೋ ಶೂಟ್ ನಲ್ಲಿ ಮಿಂಚಿದ ಪಾರುಲ್ ಯಾದವ್