ಹೊಸಕೋಟೆಯನ್ನ ವಿಶೇಷವಾಗಿ ಅಭಿವೃದ್ಧಿ ಮಾಡಲು ಸಿಎಂ ಬೊಮ್ಮಾಯಿ ಸಂಕಲ್ಪ

ಹೊಸಕೋಟೆಯನ್ನ ವಿಶೇಷವಾಗಿ ಅಭಿವೃದ್ಧಿ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇಲ್ಲಿ ಎಲ್ಲಾ ವ್ಯವಸ್ಥೆಗಳು ಸಿಗಬೇಕಾದ್ರೆ ಎಂಟಿಬಿ ಶಾಸಕರಾಗಬೇಕು. ಮುಂಬರುವಂತಹ ಎಲ್ಲಾ ಚುನಾವಣೆಗಳಲ್ಲಿಯೂ ಸಂಘಟಿತವಾಗಿ ಕೆಲಸ ಮಾಡಬೇಕು. ನಿಮಗೆ ಮತ್ತೊಮ್ಮೆ ಹೇಳ್ತಿನಿ ಧಣಿಯರಿಯದೆ ಕೆಲಸ ಮಾಡಿ ಹೊಸಕೋಟೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಎಂಟಿಬಿ ನಾಗರಾಜ್ ಗೆ ಅದಮ್ಯ ಆನೆ ಬಲದ ಶಕ್ತಿ ಇದೆ, ಎಂಟಿಬಿ ನಾಗರಾಜ್ ಕೊಡುಗೈ ದಾನಿಯಾಗಿದ್ದು ತನ್ನ ನಂಬಿದವರಿಗೆ ಪ್ರಾಣಕ್ಕೆ ಪ್ರಾಣವನ್ನ ಕೊಡ್ತಾರೆ ಎಂದು ಹಾಡಿ ಹೊಗಳಿದ್ರು. ಹೊಸಕೋಟೆ ಕ್ಷೇತ್ರಕ್ಕೆ ನ್ಯಾಯ ಸಿಗಬೇಕು ಅಂದ್ರೆ ಎಂಟಿಬಿ ಗೆಲ್ಲಬೇಕು, ಕಳೆದ ಬಾರಿ ನಡೆದ ಚುನಾವಣೆಗೂ ಈ ಬಾರಿಗೂ ದೊಡ್ಡ ಬದಲಾವಣೆಯಾಗಿದೆ, ಕೋಲಾರ, ಚಿಕ್ಕಬಳ್ಳಾಪುರ, ಗ್ರಾಮಾಂತರ , ಮಂಡ್ಯ, ರಾಮನಗರ, ಹಾಸನ ಎಲ್ಲಾ ಭಾಗಗಳಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. 2023 ರ ಚುನಾವಣೆ ವಿಶ್ರಮವಿಲ್ಲದೆ ಕೆಲಸ ಮಾಡಿದ್ರೆ ಬದಲಾವಣೆಯಾಗಲಿದೆ ಎಂದು ಹೇಳಿದ್ರು. ಇದೇ ವೇಳೆ ಹೊಸಕೋಟೆಯಲ್ಲಿ ಪವರ್ ಪಾಲಿಟಿಕ್ಸ್ ಇದೆ. ಇಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ ಪೈಪೋಟಿ ಇರೋದು. ಕ್ಷೇತ್ರಕ್ಕೆ ನಾನ್ ಕೆಲಸ ಮಾಡಬೇಕು ನಾನ್ ಕೆಲಸ ಮಾಡಬೇಕು ಎಂಬ ಪೈಪೋಟಿ ಇದೆ. ಕೇವಲ ಮಂತ್ರಿ , ಮುಖ್ಯಮಂತ್ರಿ ಆಗೋದು ಮುಖ್ಯವಲ್ಲ. ಜನನಾಯಕವಾಗೋದು ಮುಖ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು. ಇದನ್ನೂ ಓದಿ : – ಸಿದ್ದು ನಿವಾಸಕ್ಕೆ ಚಡ್ಡಿ ತಲುಪಿಸಿದ ಛಲವಾದಿ ನಾರಾಯಣಸ್ವಾಮಿ


ಹೊಸಕೋಟೆಯನ್ನು ಬೆಂಗಳೂರಿಗೆ ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ಧಿ ಮಾಡ್ತೇವೆ. ಹೊಸದಾಗಿ ನಾಲ್ಕು ಸ್ಯಾಟಲೈಟ್ ಟೌನ್ ಮಾಡ್ತಿದ್ದೇವೆ. ಇದರಿಂದ ಬೆಂಗಳೂರಿನ ಜನದಟ್ಟಣೆ ಕಮ್ಮಿ ಆಗುತ್ತೆ ಮೆಟ್ರೋ ಅಥಾವ ಸಬ್ ಅರ್ಬನ್ ರೈಲು ಯೋಜನೆ ಹೊಸಕೋಟೆ ಬರಲಿದೆ . ಮುಂದಿನ ಯೋಜನೆಯಲ್ಲಿ ಇದನ್ನ ಕೈಗೆತ್ತಿಕೊಳ್ಳುತ್ತೇವೆ ಎಂದು ಸಿಎಂ ಭರವಸೆ ನೀಡಿದ್ರು.

ಇದನ್ನೂ ಓದಿ : – RSS ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ – ವಿ. ಸೋಮಣ್ಣ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!