ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಅಡಿಕೆ ಮತ್ತು ತೆಂಗಿ ಮರಗಳು ನೆಲಕ್ಕುರುಳಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯ ಹಾಗೂ ಹಬ್ಬತ್ತನಹಳ್ಳಿ ಗ್ರಾಮಗಳಲ್ಲಿ ನಡೆದಿದೆ.
![](https://rajnewskannada.in/wp-content/uploads/2022/06/Capture-ಹ.png)
ಫಸಲಿಗೆ ಬಂದ ಸುಮಾರು 150ಕ್ಕೂ ಹೆಚ್ಚು ಅಡಿಕೆ ಹಾಗೂ 100 ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿದೆ. ಭಾರೀ ಮಳೆಗೆ 4-5 ಮನೆಗಳ ಮೇಲ್ಚಾವಣಿಗಳು ಕೂಡ ಹಾರಿ ಹೋಗಿದೆ. ಇಷ್ಟಾದರೂ ಕೂಡ ಸ್ಥಳಕ್ಕೆ ಭೇಟಿ ಕೊಡದ ಅಧಿಕಾರಿಗಳಿಗೆ ರೈತರು ಶಾಪ ಹಾಕಿದ್ದಾರೆ. ಇದನ್ನೂ ಓದಿ : – ಧಾರವಾಡದಲ್ಲಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಕುಮಾರಸ್ವಾಮಿ ಭೇಟಿ