ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರೋ ತುಂಗಭದ್ರಾ ಜಲಾಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನಕ್ಕೆ 5 ಟಿಎಂಸಿ ನೀರು ಹರಿದು ಬಂದಿದೆ.
![](https://rajnewskannada.in/wp-content/uploads/2022/05/ತು-1.png)
ನಿನ್ನೆ 14 ಟಿಎಂಸಿ ಇದ್ದ ನೀರು, ಇಂದು 19.766 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವಿನಲ್ಲೂ ಕೂಡ ಹೆಚ್ಚಳವಿದೆ. ಸದ್ಯ 72,592 ಕ್ಯೂಸೆಕ್ ನೀರು ಒಳಹರಿವು ಇದೆ. ಇದನ್ನೂ ಓದಿ :- ಸಮುದ್ರದಲ್ಲಿ ಚೇಸಿಂಗ್ ಮಾಡಿದ ಅಧಿಕಾರಿಗಳು – 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
![](https://rajnewskannada.in/wp-content/uploads/2022/05/ತು-2.png)
ಕಳೆದ 24 ತಾಸಿನಲ್ಲಿ 61,189 ಕ್ಯೂಸೆಕ್ ನೀರು ಒಳಹರಿವಿದೆ. 100.855 ಟಿಎಂಸಿ ಸಾಮರ್ಥ್ಯವಿರೋ ತುಂಗಭದ್ರಾ ಜಲಾಶಯದಲ್ಲಿ ಸದ್ಯ 19.766 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಈ ಹೊತ್ತಿಗೆ 6.952 ಟಿಎಂಸಿ ನೀರು ಸಂಗ್ರಹವಿತ್ತು.
ಇದನ್ನೂ ಓದಿ :- ಧಾರವಾಡದಲ್ಲಿ ಮರಕ್ಕೆ ಕ್ರೂಸರ್ ಡಿಕ್ಕಿ – 7 ಮಂದಿ ಸಾವು