ಬಿಜೆಪಿಯವರಿಗೆ ಚರಂಡಿ ಎತ್ತುವ ದಲಿತರು ಇಷ್ಟವೇ? – ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬಿಜೆಪಿಯವರಿಗೆ ಕಾನ್ವೆಂಟ್ನಲ್ಲಿ ಓದುವ ದಲಿತರು ಇಷ್ಟವಿಲ್ವಾ? ಬಿಜೆಪಿಯವರಿಗೆ ಯಾವ ರೀತಿಯ ದಲಿತರು ಇಷ್ಟ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಚರಂಡಿ ಎತ್ತುವ ದಲಿತರು ಇಷ್ಟವೇ? ದಲಿತರು ಎಲ್ಲಿ ಇರಬೇಕು ಎಂದು ಬಯಸುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಕಾನ್ವೆಂಟ್ ದಲಿತ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್, ಸಚಿವ ಸುನಿಲ್ ಕುಮಾರ್ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಕಾನ್ವೆಂಟ್ ದಲಿತ ಅಂತ ನನ್ನ ಬಗ್ಗೆ ಹೇಳಿದ್ದಾರೆ. ಇಂತಹ ಹೇಳಿಕೆಗಳನ್ನು ಮಂತ್ರಿಗಳಿಗೆ ಬಿಜೆಪಿ ಐಟಿ ಸೆಲ್ ಹೇಳಿಕೊಡುತ್ತಾ? ಏಕೆ ದಲಿತರು ಬೆಂಗಳೂರಲ್ಲಿ ಹುಟ್ಟಬಾರದಾ? ಮೈಸೂರು ದಲಿತರು ಬೇರೆ, ಬೆಂಗಳೂರು ದಲಿತರು ಬೇರೆಯಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಇದನ್ನು ಓದಿ :-  ಜೆಡಿಎಸ್ ಪಕ್ಷವನ್ನು ಅಷ್ಟು ಸುಲಭವಾಗಿ ಯಾರು ನಾಶ ಮಾಡಲು ಆಗಲ್ಲ – ಕುಮಾರಸ್ವಾಮಿ


ನಾನು ಓದಿದ್ದು ಕಾನ್ವೆಂಟ್ನಲ್ಲಿ ಅಲ್ಲ, ಉಡುಪಿಯ ಅದಮಾರು ಮಠದ ಶಾಲೆ ಬೆಂಗಳೂರಲ್ಲಿದೆ. ಆ ಅದಮಾರು ಮಠದ ಶಾಲೆಯಲ್ಲಿ ಓದಿದ್ದೇನೆ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಪ್ರಜ್ಞಾವಂತ ದಲಿತ, ನಾನು ಕಾಸ್ಮೋಪಾಲಿಟನ್ ದಲಿತ. ಚಿಕಾಗೋದಿಂದ ಹಿಡಿದು ಚಿತ್ತಾಪುರದವರೆಗೆ ಯಾವುದೇ ವಿಷಯ ನಿರ್ಧಾರ ಮಾಡಿ ಹೇಳಿ, ನಾನು ಚರ್ಚೆಗೆ ಸಿದ್ದನಿದ್ದೇನೆ. ನಿಮ್ಮ ಎರಡು ರೂ. ಟ್ರೋಲರ್ಗಳು ನೆಹರೂ ಬಗ್ಗೆ, ಸಿದ್ದರಾಮಯ್ಯ ಬಗ್ಗೆ ಮಾತಾಡ್ತಾರೆ. ಅವರಿಗೆ ಇರೋ ಯೋಗ್ಯತೆ ನಮಗಿಲ್ವಾ? ನಾನು ಕೂಡ ಎರಡು ಬಾರಿ ಮಂತ್ರಿ ಆಗಿದ್ದೇನೆ. ಸಿಎಂಗೆ ಪ್ರಶ್ನೆ ಮಾಡುವ ಜವಾಬ್ದಾರಿ ನನ್ನದು, ನಾನು ವಿರೋಧ ಪಕ್ಷದ ವಕ್ತಾರ. ನಿಮ್ಮನ್ನು ಹೇಳಿಕೊಂಡು, ಕೇಳಿಕೊಂಡು ಕೂರುವುದಕ್ಕೆ ನಾನು ಇದ್ದೀನಾ? ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಇದನ್ನು ಓದಿ :- ಮೈಸೂರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದು ಇವನಾ..? -ಸಂಸದ ಪ್ರತಾಪ್ ಸಿಂಹ ವಿರುದ್ದ ಗುಡುಗಿದ ಸಿದ್ದರಾಮಯ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!