ಹರಪನಹಳ್ಳಿಯಲ್ಲಿ (Harapanahalli) ರಾಗಿ ಬೆಳೆದ ರೈತರು (Farmers) ರಾಗಿ (Ragi) ಖರೀದಿ ಕೇಂದ್ರದ ಎದುರು ಧಿಡೀರನೇ ಪ್ರತಿಭಟನೆ ಮಾಡುತ್ತಿದ್ದಾರೆ .ಕೊಟ್ಟೂರು- ಹರಪನಹಳ್ಳಿಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಗಿ ಖರೀದಿಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಟೋಕನ್ ನೀಡಿದ್ದಾರೆ . ಆದ್ರೆ ರಾಗಿ ಖರೀದಿ ಮಾಡುತ್ತಿಲ್ಲಾ, ಟ್ರಾಕ್ಟರ್ ಗಳಲ್ಲಿ ರಾಗಿ ತುಂಬಿಕೊಂಡು ಸಾಲಾಗಿ ನಿಲ್ಲಿಸಿದ್ದಾರೆ . ಬೇಗ ಖರೀದಿ ಮಾಡಿದ್ರೆ, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗುತ್ತಾರೆ . ಇಲ್ಲಾವಾದ್ರೆ, ಬಿತ್ತನೆ, ಭೂಮಿ ಹದ ಮಾಡೋ ಕೆಲಸಕ್ಕೆ ಸಮಸ್ಯೆಯಾಗುತ್ತದೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಸ್ಥಳಕ್ಕೆ ಪೊಲೀಸರು ಮತ್ತು ತಹಶಿಲ್ದಾರರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ : – ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಂದರೆ ಸ್ವಾಗತ – ಸಚಿವ ನಾರಾಯಣಗೌಡ