ಕಲಬುರಗಿಯಲ್ಲಿ(Kalaburagi) ಬಿಜೆಪಿ ಸರ್ಕಾರದ ಪಠ್ಯ ಪುಸ್ತಕ ಕೇಸರಿಕರಣ ವಿರೋಧಿಸಿ ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
![](https://rajnewskannada.in/wp-content/uploads/2022/06/protst.png)
ಕಲಬುರಗಿ ನಗರದ ಜಗತ್ ವೃತ್ತದ ಬಸವೇಶ್ವರ ಪುತ್ತಳಿ ಎದುರು ಸಮಿತಿ ಸದಸ್ಯರು ಧರಣಿ ನಡೆಸಿದ್ರು. ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ (Priyank kharge) ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಪಠ್ಯ ಕೇಸರಿಕರಣ ವಿರುದ್ದ ಹಾಗೂ ನಾಡಿನ ಮಕ್ಕಳ ಭವಿಷ್ಯಕ್ಕಾಗಿ ಪ್ರತಿಭಟನೆ ನಡೆಸಿದ್ರು. ಪರಿಷ್ಕೃತ ಪಠ್ಯ ಹಿಂಪಡೆಯಲು ಒತ್ತಾಯಿಸಿದ್ರು. ಮನುಸ್ಮೃತಿಯನ್ನು ಮಕ್ಕಳ ಮೇಲೆ ಹೇರುವ ಪಠ್ಯ ಪುಸ್ತಕ ರಚಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಪರಿಷ್ಕೃತ ಪಠ್ಯದಲ್ಲಿ ಇತಿಹಾಸ ತಿರುಚುವುದರ ಜೊತೆಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ನಾಳೆ ಬೆಳಿಗ್ಗೆ ೧೧ ಗಂಟೆವರೆಗೂ ಅಹೋರಾತ್ರಿ ಧರಣಿ ನಡೆಯಲಿದೆ. ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ (Sharan prakash patil) , ಮಾಜಿ MLA ಅಲ್ಲಮಪ್ರಭು ಪಾಟೀಲ್ (Alamaprabhu patil) , ತಿಪ್ಪಣ್ಣಪ್ಪ ಕಮಕನೂರ್, ಶಾಸಕಿ ಖನೀಜ್ ಫಾತೀಮಾ, ಅಂಜಲಿ ನಿಂಬಾಳ್ಕರ್, ಅಜಯ್ ಸಿಂಗ್ ಸೇರಿದಂತೆ ವಿವಿಧ ಸಂಘನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ : – ಬೆಳಗಾವಿಯಲ್ಲಿ ಚುನಾವಣಾಧಿಕಾರಿಯಿಂದ ಹನುಮಂತ ನಿರಾಣಿ ಪಿಎಗೆ ತರಾಟೆ