ರಾಜ್ಯ ರಾಜಧಾನಿಯಲ್ಲಿ ಇಂದು ಹಲವೆಡೆ ಗುಡುಗು ಸಹಿತ ಮಳೆ ಅಬ್ಬರ ಶುರು ವಾಗಿದೆ. ಬೆಂಗಳೂರು ನಗರದ ಹಲವೆಡೆ ಧಾರಾಕಾರವಾಗಿ ವರುಣನ ಆರ್ಭಟ ಶುರುವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
![](https://rajnewskannada.in/wp-content/uploads/2022/05/bangalore.png)
ಮಡಿವಾಳ, ಕೋರಮಂಗಲ , ಸರ್ಜಾಪುರ, ಬನಶಂಕರಿ, ಕತ್ರಿಗುಪ್ಪೆ,ನಾಯಂಡಳ್ಳಿ ಯಲ್ಲಿ ಆನೆಕಲ್ಲು ಮಳೆಯಿಂದಾಗಿ ಬಡವರು ಮತ್ತು ಬೀದಿ ವ್ಯಾಪಾರಿಗಳು ಪರದಾಡುವಂತಹ ಸ್ಥಿತಿ ಎದುರಾಯಿತು.
![](https://rajnewskannada.in/wp-content/uploads/2022/05/bangalore-1.png)
ಬೆಂಗಳೂರಿನಲ್ಲಿ ಮಳೆಯಿಂದಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಸಾರ್ವಜನಿಕರು ಪರದಾಡುವಂತಹ ಸ್ಥಿತಿ ಕೂಡ ಎದುರಾಗಿದೆ.
ಇದನ್ನು ಓದಿ :- ಕೋಲಾರದಲ್ಲಿ ಶುರುವಾದ ಅಕಾಲಿಕ ಮಳೆ – ರೈತರ ಮೊಗದಲ್ಲಿ ಮಂದಹಾಸ