ಬೆಂಗಳೂರು : ಪೊಲೀಸರು ಜನರ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಬೇಕು. ಪೊಲೀಸರು, ಸದಾ ಜನರ ಜೊತೆ ಇದ್ದೇವೆ, ಯಾವುದಕ್ಕೂ ಆತಂಕ ಪಡಬೇಕಾಗಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೇಸ್ ಬುಕ್ ಲೈವ್ನಲ್ಲಿ ಸಾರ್ವಜನಿಕರ ಜೊತೆ ಮಾತನಾಡಿದ ಅವರು, ಪೊಲೀಸರು ಜನರ ಪರವಾಗಿ ಕೆಲಸ ಮಾಡ ಬೇಕಾಗತ್ತೆ, ನಾವು ಜನರಿಗೆ ಹತ್ತಿರವಾಗುವ ಹಲವು ಜನ ಸಂಪರ್ಕ ಕಾರ್ಯಕ್ರಮಗಳನ್ನ ಮಾಡಿದ್ದೇವೆ. ಜೊತೆಗೆ ಕೊರೊನಾ ಸಮಯದಲ್ಲಿ ನಾವು ಜನರ ಸಹಕಾರವನ್ನ ಕೋರುತ್ತೇವೆ ಎಂದರು.
ಹಲವರು ಲಾಕ್ ಡೌನ್ ಬಗ್ಗೆ ಕೇಳ್ತಿದ್ದಾರೆ. ಲಾಕ್ ಡೌನ್ ಬಗ್ಗೆ ಯಾರೂ ಸಹ ಆತಂಕ ಪಡಬೇಡಿ, ನೈಟ್ ಕರ್ಪ್ಯೂ ತುಂಬಾ ಬಿಗಿಯಾಗಿ ಫಾಲೋ ಆಗುತ್ತಿದೆ. ಕೋವಿಡ್ ನಿಯಮಗಳನ್ನ ಪ್ರತಿಯೊಬ್ಬರು ಫಾಲೋ ಮಾಡಬೇಕು, ಲಾಕ್ ಡೌನ್ ಬಗ್ಗೆ ಯಾರೂ ಆತಂಕ ಪಡುವ ಅವಕಾಶವಿಲ್ಲ. ಅದರ ಬಗ್ಗೆ ತೀರ್ಮಾನ ಮಾಡಲಿಕ್ಕೆ ಹೈ ಪವರ್ ಕಮಿಟಿ ಇದೆ ಎಂದು ತಿಳಿಸಿದರು.
ನಾವು ನಮ್ಮ ಜವಾಬ್ದಾರಿಯನ್ನ ಸರಿಯಾಗಿ ಮಾಡಬೇಕು, ಮುಂಬಯಿ, ದೆಹಲಿ , ಉತ್ತರ ಪ್ರದೇಶ, ಲಕ್ನೋಗಳಲ್ಲೂ ಸಮಸ್ಯೆಗಳಿವೆ ಎಲ್ಲಾ ಕಡೆ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆಯಾಗುತ್ತಿದೆ ಎಂದರು.