ಶಾಲಾ ಪಠ್ಯದಲ್ಲಿ ಬಲಪಂಥೀಯ ಚಿಂತನೆ ಅಳವಡಿಕೆ – ಸರ್ಕಾರದ ವಿರುದ್ಧ ಪ್ರಗತಿಪರ ಚಿಂತಕರು ಬಹಿರಂಗ ಪತ್ರ

ಶಾಲಾ ಪಠ್ಯದಿಂದ ಭಗತ್ ಸಿಂಗ್ ( BHAGATH SINGH ) ಸೇರಿದಂತೆ ಹಲವು ಸಾಹಿತಿಗಳ ಪಠ್ಯ ಬಿಟ್ಟಿರುವ ವಿಚಾರ ಕುರಿತಂತೆ ನಾಡಿನ ಪ್ರಗತಿಪರ ಚಿಂತಕರು, ಹಿರಿಯ ಸಾಹಿತಿಗಳು, ಪತ್ರಕರ್ತರು, ಶಿಕ್ಷಣ ತಜ್ಞರು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ .

ಒಟ್ಟು 83 ಚಿಂತಕರು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದು ಆಕ್ರೋಶವ್ಯಕ್ತಪಡಿಸಿದ್ದಾರೆ. 10 ನೇ ತರಗತಿಯ ಪಠ್ಯದಿಂದ ಪಿ ಲಂಕೇಶ್ ರ (P. lankesh ) ಮೃಗ ಮತ್ತು ಸುಂದರಿ ಎಂಬ ಪಾಠವನ್ನು ಕೈ ಬಿಡಲಾಗಿದೆ. ಡಾ. ಜಿ ರಾಮಕೃಷ್ಣರ ( dr . G. ramakrishna )ಭಗತ್ ಸಿಂಗ್, ಸಾರಾ ಅಬೂವಕ್ಕರ್ ಅವರ ಯುದ್ಧ ಎಎನ್ ಮೂರ್ತಿಯವರ ವ್ಯಾಘ್ರ, ಶಿವಕೋಟ್ಯಾಚಾರ್ಯರ ಸುಕುಮಾರಸ್ವಾಮಿ ಕಥೆಗಳನ್ನೂ ಕೈ ಬಿಡಲಾಗಿದೆ. ಜೊತೆಗೆ ಬ್ರಹ್ಮ ಶ್ರೀ ನಾರಾಯಣ ಗುರುಗಳು, ಪೆರಿಯಾರ್ ಚಿಂತನೆಗಳಿರುವ ಪಠ್ಯಗಳನ್ನೂ ಹೊರಗಿಡಲಾಗಿದೆ . ಅದರ ಬದಲಿಗೆ ಎಸ್ ವಿ ಪರಮೇಶ್ವರ ಭಟ್ಟರ ಹೇಮಂತ, ಗಜನನಾ ಶರ್ಮಾತ , ಚನ್ನ ಭೈರಾಧೇವಿ, ಎನ್ ರಂಗನಾಥ್ ರ ರಾಮರಾಜ್ಯ ಹಾಗೂ ಎಸ್ ಎಲ್ ಭೈರಪ್ಪರ ನಾನು ಕಂಡಂತೆ. ಡಾ. ಬಿಜಿಎಲ್ ಸ್ವಾಮಿಯವರ ಕಥೆಗಳನ್ನು ಅಳವಡಿಕೆ ಮಾಡಲಾಗಿದೆ . ಇದನ್ನೂ ಓದಿ : – ಚಿಕ್ಕಮಗಳೂರಿನ ದತ್ತಪೀಠದಲ್ಲಿ ವಿವಾದದ ಮೇಲೆ ವಿವಾದ…?

ಯಾವುದೇ ಚರ್ಚೆ ಇಡದೆ ಸರ್ಕಾರ ಬೇಕಾಬಿಟ್ಟಿ ಬಲಪಂಥೀಯ ಚಿಂತನೆಗಳನ್ನು ಪಠ್ಯಕ್ಕೆ ತುಂಬಿದೆ . ಸರ್ಕಾರ ಬದಲಾದಂತೆ ಪಠ್ಯ ಬದಲಿಸುವ ಪರಿಪಾಠ ಸರಿಯಲ್ಲ ಎಂದು ಪತ್ರದ ಮೂಲಕ ಅಸಮಾಧಾನ ಹೊರಹಾಕಿದ್ದಾರೆ . ಯಾವುದೇ ಪೂರ್ವಾಲೋಚನೆ ಇಲ್ಲದೆ ಶಿಕ್ಷಣ ತಜ್ಞರ ಸಲಹೆ ಇಲ್ಲದೆ ಪಠ್ಯ ತಯಾರಿಸಲಾಗಿದೆ . ಪಠ್ಯ ಪುಸ್ತಕ ಪರಿಷ್ಕೃತ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞ ಅಲ್ಲ, ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆ ಏನು..? ಅವರ ಕೊಡುಗೆ ಏನು ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ . ಡಾ. ಮರುಳಸಿದ್ಧಪ್ಪ, ಡಾ. ರಾಜೇಂದ್ರ ಚೆನ್ನಿ, ಡಾ. ವಿಜಯಾ, ಡಾ. ಬಂಜೆಗರೆ ಜಯಪ್ರಕಾಶ್ , ಡಾ. ರೆಹಮತ್ ತರಿಕೆರೆ, ದಿನೇಶ್ ಅಮಿನ್ ಮಟ್ಟು, ವಿಪಿ ನಿರಂಜನಾರಾಧ್ಯ, ಪ್ರೊ. ಪಟ್ಟಾಭಿರಾಮ ಸೋಮಯಾಜಿ ಸೇರಿದಂತೆ 83 ಮಂದಿ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ . ಇದನ್ನೂ ಓದಿ :- ಗಣಿ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂಕೋರ್ಟ್ ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!