ವಿಧಾನ ಸಬೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಜೆ ಡಿ ಎಸ್ ನ ಒಂದು ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದಲ್ಲಿ ತನ್ನ ವರ್ಚಸ್ಸು ಹಾಗೂ ಪ್ರಭಾವ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಯುವ ನಾಯಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಕಣಕ್ಕಿಲಿಸಲು ಜೆಡಿ ಎಸ್ ಪಕ್ಷ ಉನ್ನತ ಸಮಿತಿ ಚಿಂತನೆ ನಡೆಸಿದೆ.
![](https://rajnewskannada.in/wp-content/uploads/2022/05/image-16.jpeg)
ಕೆ ಸಿ ವೀರೇಂದ್ರ ಪಪ್ಪಿ 2018ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿ ಎಸ್ ಪಕ್ಷದಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ರು. ಬಳಿಕ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕೆ.ಸಿ.ವೀರೇಂದ್ರ ಅವರ ಮನೆ ಕಚೇರಿ ಮೇಲೆ ಆಧಾಯ ತೆರಿಗೆ ದಾಳಿ ನಡೆದ ಪ್ರಕರಣ ಇತ್ಯರ್ಥವಾಗಿದ್ದು ಈ ಸಂಬಂಧ ಅವರ ವಿರುದ್ದ ಯಾವುದೇ ಪ್ರಕರಣ ಬಾಕಿಯಿಲ್ಲ. ಇದನ್ನೂ ಓದಿ :- ಚಿಕ್ಕಮಗಳೂರಿನ ದತ್ತಪೀಠದಲ್ಲಿ ವಿವಾದದ ಮೇಲೆ ವಿವಾದ…?
![Veerendra took shortcut to riches, but law caught up- The New Indian Express](https://images.newindianexpress.com/uploads/user/imagelibrary/2016/12/14/w600X390/veerendra11.jpg)
ಅಲ್ಪ ಸಂಖ್ಯಾತ ಸಮುದಾಯದ ಸಿ.ಎಂ.ಇಬ್ರಾಹಿಂ ಅವರಿಗೆ ರಾಜ್ಯಾಧಕ್ಷ ಹುದ್ದೆ ನೀಡುವ ಮೂಲಕ ಅಲ್ಪಸಂಖ್ಯಾತ ಸಮುದಾಯ ತೃಪ್ತಿ ಪಡಿಸಿದ ಜೆ.ಡಿ.ವರಿಷ್ಠ ನಾಯಕರು. ಉತ್ತರ ಕರ್ನಾಟಕ ಭಾಗದ ಬಹು ಸಂಖ್ಯಾತ ಲಿಂಗಾಯತ ಸಮುದಾಯ ಓಲೈಸಿಕೊಳ್ಳುವ ಉದ್ದೇಶದಿಂದ ಆ ಸಮುದಾಯದ ಯುವ ನಾಯಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಲು ಪಕ್ಷದ ವರಿಷ್ಟರು ಚಿಂತನೆ ನಡೆಸಿದ್ದಾರೆ.
![](https://rajnewskannada.in/wp-content/uploads/2022/05/image-17.jpeg)
ಲಿಂಗಾಯತ ಸಮುದಾಯದ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಇತ್ತೀಚೆಗೆ ಜೆಡಿ ಎಸ್ ತೊರೆದು ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಆ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಒದಗಿಸುವ ಉದ್ದೇಶದಿಂದ ಕೆ.ಸಿ.ವೀರೇಂದ ಪಪ್ಪಿಯವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ :- ಸಮುದ್ರದಲ್ಲಿ ಚೇಸಿಂಗ್ ಮಾಡಿದ ಅಧಿಕಾರಿಗಳು – 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ