ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ರೇಡ್ ಕೇಸ್ ಸಂಬಂಧ ಡಿಕೆಶಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನ ಹೈಕೋರ್ಟ್ ವಜಾ ಮಾಡಿದೆ.
ಅಧೀನ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಹೈಕೋರ್ಟ್, ಈ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಜಾನ್ ಡಿ ಮೈಕಲ್ ಕುನ್ಹಾ ಈ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಆದಾಯ ತೆರಿಗೆ ಇಲಾಖೆ 2 ವರ್ಷ ಪಟ್ಟಿದ್ದ ಶ್ರಮ ವ್ಯರ್ಥವಾಗಿದೆ.
2019 ರಿಂದ ಕೇಸ್ ರಿ ಸ್ಟೋರ್ ಮಾಡಲು ಹೋರಾಟ ಮಾಡಿತ್ತು. ಡಿಕೆ ಶಿವಕುಮಾರ್ ಪರ ವಕೀಲ ಶೇಷಾಚಲ ಈ ಪ್ರಕರಣ ಸಂಬಂಧ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ :
ಈಗಲ್ ಟನ್ ರೆಸಾರ್ಟ್ ನಲ್ಲಿ ಡಿಕೆಶಿಯಿಂದ ಸಾಕ್ಷಿನಾಶ ಮಾಡಿದ ಆರೋಪವಿತ್ತು. ತನ್ನ ಪರ್ಸ್ನಲ್ಲಿದ್ದ ದಾಖಲೆಗಳ ಹರಿದು ಹಾಕಿ ಸಾಕ್ಷಿನಾಶ ಮಾಡಿದ ಆರೋಪವಿತ್ತು. 2019ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಐಟಿ ಇಲಾಖೆ ಅಧಿಕಾರಿಗಳ ತಂಡಕ್ಕೆ ಇದೀಗ ದೊಡ್ಡ ನಿರಾಸೆಯಾಗಿದೆ..