ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮುಂದುವರಿಯುವುದು ದೃಢಪಟ್ಟಿದ್ದು, ಈ ಮೂಲಕ ನಾಯಕತ್ವದ ಬದಲಾವಣೆ ಕುರಿತು ಬಿಜೆಪಿಯಲ್ಲಿ ಎದ್ದಿದ್ದ ಊಹಾಪೋಹಾಕ್ಕೆ ತೆರೆಬಿದ್ದಿದೆ.
ನಾಯಕತ್ವ ಬದಲಾವಣೆ ಕುರಿತು ಪದೇಪದೆ ದೆಹಲಿ ಬರಬೇಡಿ ಎಂದು ಭಿನ್ನರಿಗೆ ಸೂಚಿಸುವ ಮೂಲಕ ದೆಹಲಿಗೆ ತೆರಳಿದ್ದ ಭಿನ್ನರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಮೇಲೆ ಕೆಲ ಆಪಾದನೆಗಳು ಬಂದಿವೆ, ಆಪಾದನೆಗಳ ನಡುವೆಯೂ ಪಕ್ಷ ಸಂಘಟನೆ ಹೇಗೆ ಮಾಡಬೇಕು. ಸರ್ಕಾರದ ಕಾರ್ಯಗಳು ಜನರಿಗೆ ಹೇಗೆ ತಿಳಿಸಬೇಕು ಮುಂತಾದ ವಿಚಾರಗಳ ಬಗ್ಗೆ ಜೂನ್ 7 ರಂದು ಸಭೆ ನಡೆಸಿ ಚರ್ಚಿಸುವಂತೆ ಭಿನ್ನರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.