ರಾಜ್ಯಸಭೆ ಚುನಾವಣೆ ಬಳಿಕ ಮಾತಿನ ಸಮರಗಳು ಜೋರಾಗಿ ನಡೆಯುತ್ತಿವೆ. ಅಡ್ಡ ಮತದಾನ ಮಾಡಿದ ಶಾಸಕರು ಮತ್ತು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆಯ ಹಾದಿ ಹಿಡಿದಿದೆ. ವಿಧಾನ ಪರಿಷತ್ ಸದಸ್ಯ ಟಿಎ ಶರವಣ ರಾಜ್ಯಸಭೆ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಜೆಡಿಎಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ ಹಾಗೂ ಸಿದ್ದರಾಮಯ್ಯ ಡೀಲ್ ರಾಜ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಡೀಲ್ ರಾಜ, ಡೀಲ್ ರಾಮಯ್ಯ. ಸಿದ್ದರಾಮಯ್ಯ ಸುಳ್ಳು ರಾಮಯ್ಯ. ಮಾತಾಡೋದು ಆಚಾರ, ಮಾಡೋದು ಬದನೆಕಾಯಿ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಬಿ ಟೀಂ ಸಿದ್ದರಾಮಯ್ಯ ಎಂಬುದು ಗೊತ್ತಾಗಿದೆ. ಬಿಜೆಪಿ ಗೆಲ್ಲಿಸೋಕೆ ಎಷ್ಟು ಸೂಟ್ಕೇಸ್ ತಗೊಂಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹೇಳಬೇಕು ಎಂದು ಒತ್ತಾಯ ಮಾಡಿದರು. ಸಮ್ಮಿಶ್ರ ಸರ್ಕಾರದ ಬೆನ್ನಿಗೆ ಚೂರಿ ಹಾಕಿದ್ದೀರಿ. ಇದನ್ನೂ ಓದಿ : – ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ
ಕಾಂಗ್ರೆಸ್ನ ಅನೇಕ ಶಾಸಕರು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯರಿಂದ ನಿಮಗೆ ಸೋಲು ಆಯ್ತು ಎಂದು ಆರೋಪ ಮಾಡಿದರು. ನಾನು, ಫಾರೂಕ್, ದೇವೇಗೌಡರ ಸೂಚನೆ ಮೇಲೆ ಸಿದ್ದರಾಮಯ್ಯಗೆ ಮನವಿ ಮಾಡಲು ಅವರ ಮನೆಗೆ ಹೋಗಿದ್ವಿ. ಆದರೆ ಸಿದ್ದರಾಮಯ್ಯ ಹೊರಗೆ ಬಂದು ಸುಳ್ಳು ಹೇಳಿದರು. ನಾನು ಕುಪೇಂದ್ರ ರೆಡ್ಡಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದೆ. ಆದರೆ ಅದನ್ನು ಹೇಳದೇ ಬೇರೆ ರೀತಿ ಬಿಂಬಿಸಿದರು ಎಂದು ಆರೋಪಿಸಿದ್ರು.
ಇದನ್ನೂ ಓದಿ : – ಸಿದ್ದರಾಮಯ್ಯ ಒಬ್ಬ ಶಕುನಿ ಇದ್ದಂತೆ – MLC ಚೆಲುವಾದಿ ನಾರಾಯಣಸ್ವಾಮಿ