ಒಂದೂವರೆ ವರ್ಷದಲ್ಲಿ ಜಗತ್ತು ಕೋವಿಡ್ ಮುಕ್ತ – ಭವಿಷ್ಯ ನುಡಿದ ಕೋಡಿಹಳ್ಳಿ ಸ್ವಾಮೀಜಿ

ಇನ್ನೂ ಒಂದೂವರೆ ವರ್ಷದಲ್ಲಿ ಕೊರೋನಾ ಹೋಗತ್ತೆ ಆದರೇ, ಹೋಗುವಾಗ ಕಷ್ಟ ಕೊಟ್ಟು ಹೋಗತ್ತೆ. ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಹಾಗತ್ತೆ, ಅಷ್ಟೊಂದು ನೋವನ್ನ ಕೊಡತ್ತೆ ಎಂದು ಕೋಡಿಹಳ್ಳಿ ಶ್ರೀಗಳು ಭಯಾನಕ ಭವಿಷ್ಯ ನುಡಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು ಮೂರು ತಿಂಗಳ ಹಿಂದೆ ಹೇಳಿದ್ದೆ ಮತ್ತೆ ಕೋವಿಡ್ ಬರುತ್ತೆ ಅಂತಾ. ಕೋವಿಡ್ ಬಗ್ಗೆ ಭಯ ಪಡೋ ಅವಶ್ಯಕತೆ ಇಲ್ಲ. ಒಂದುವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಬಿಡುಗಡೆಯಾಗತ್ತೆ. ಕೋವಿಡ್ ವಿಶೇಷ ಅಂದ್ರೆ ಮನುಷ್ಯ ಕಷ್ಟ ಬಂದಾಗ ದೇವರು, ಧರ್ಮ ಅಂತಾನೆ, ಪ್ರಾರ್ಥನೆ ಮಾಡ್ತಾನೆ. ಕೋವಿಡ್ ವಿಶೇಷ ಕಾಯಿಲೆ ನೇರವಾಗಿ ಬಂದು ದೇವರನ್ನೆ ಹಿಡಿದುಕೊಂಡು, ದೇವಸ್ಥಾನಗಳ ಬಾಗಿಲು ಹಾಕಿಸ್ತು. ಆ ಮೇಲೆ ಜನರಮೇಲೆ ಬಂತು, ನೀರಿನ ಮೇಲೆ, ಭೂಮಿಮೇಲೆ ಬಂತು. ಒಂದುವರೆ ವರ್ಷದಲ್ಲಿ ಹೋಗತ್ತೆ ಆದರೇ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗತ್ತೆ. ಈಗಿನಿಂದಲೇ ಎಚ್ಚರ ವಹಿಸಿದ್ರೆ ಅದರಿಂದ ತಪ್ಪಿಸಿಕೊಳ್ಳಬಹುದು ಎಂದು ಎಚ್ಚರಿಕೆಯನ್ನು ನೀಡಿದ್ರು. ಇದನ್ನೂ ಓದಿ : – ಅವನೇನು ಕತ್ತೆ ಕಾಯುತ್ತಿದ್ನಾ..? – ಹೆಚ್.ಡಿ.ಕೆ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶಾಸಕ ಶ್ರೀನಿವಾಸ್


ಮಳೆ ಬಗ್ಗೆ ಕೋಡಿಹಳ್ಳಿ ಶ್ರೀಗಳ ಭವಿಷ್ಯ
ಈ ಹಿಂದೆ ನಾನು ಹೇಳಿದ್ದೆ ಕೆಂಡಾಮಂಡಲ ಆಗತ್ತೆ ಅಂತಾ. ಮಲೆನಾಡು ಬಯಲಾಗತ್ತೆ , ಬಯಲು ಮಲೆನಾಡಗತ್ತೆ ಅಂತಾ ಹೇಳಿದ್ದೆ. ಈಗ ಎಲ್ಲ ಕಡೆ ನೀರು ಕೆಂಡ್ಲ ಮಂಡ್ಲ ಆಗ್ತಾ ಇದೆ. ಮುಂಗಾರು ಮಳೆ ಇನ್ನೂ ಜಾಯ್ತಿಯಾಗೊ ಲಕ್ಷಣ ಕಾಣ್ತಾ ಇದೆ. ಈ ಬಾರಿ ಅಕಾಲಿಕ ಮಳೆ ಆಗೊ ಲಕ್ಷಣನೂ ಇದೆ. ತೊಂದರೆ ಇಲ್ಲ, ಮಳೆ ಹಾವಳಿ ಜಾಸ್ತಿ ಇದೆ. ದೊಡ್ಡ ದೊಡ್ಡ ನಗರಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ರು.


ರಾಜಕೀಯದ ಬಗ್ಗೆ ಕೋಡಿಹಳ್ಳಿ ಶ್ರೀಗಳ ಮಾತು
ರಾಜಕೀಯ ಅಸ್ಥಿರ ಅಂತಾ ಹೇಳಿದ್ದೆ. ಗುಂಪು ಆಗ್ತಾವೆ ಅಂತಾ ಹೇಳಿದ್ದೆ ಅದನ್ನ ಕಂಡುಕೊಂಡಿದ್ದೀರ. ನಾನು ಭಾರತ ದೇಶದಲ್ಲಿ ಇಂದು ಅವಘಡ ಆಗತ್ತೆ ಎಂದಿದ್ದೆ. ಈಗ ಪ್ರಾರಂಭವಾಗಿದೆ. ಪೈಗಂಬರರನ್ನ ಅವಹೇಳನ ಮಾಡಿ, ಜಗತ್ತಿನಾದ್ಯಂತ ಕಿಚ್ಚು ಶುರುವಾಗಿದೆ. ಮುಂದೆ ಇದರಿಂದ ಅಪಾಯ ಇದೆ ಎಂದು ತಿಳಿಸಿದ್ರು.

ಇದನ್ನೂ ಓದಿ : – ಒಂದು ವಾರದ ವರೆಗೂ ನಾನು ಯಾರನ್ನು ಭೇಟಿ ಮಾಡುವುದಿಲ್ಲ – ಕುಮಾರಸ್ವಾಮಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!