ಹಿಂದೂ ಭಯೋತ್ಪಾದಕರೆಂಬ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿಚಕುಮಾರ್ ಬಿಕೆ ಹರಿಪ್ರಸಾದ್ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ.
ಭಯೋತ್ಪಾದಕರು ಅಂದ್ರೆ ಅಶಾಂತಿ ಮೂಡಿಸುವವರು. ಜಾತಿ ಜಾತಿಗೆ ಅಶಾಂತಿ ಮಾಡುವವರು ಯಾರು..? ಇದು ಸರ್ಕಾರದ ಜವಾಬ್ದಾರಿ. 15 ದಿನಗಳಲ್ಲಿ ಹೊಸ ನೀತಿ ತರ್ತೇವೆಂದಿದ್ದಾರೆ. ಇಲ್ಲದಿರೋದನ್ನೆಲ್ಲ ಸರ್ಕಾರ ಸೃಷ್ಟಿಸುತ್ತಿದೆ.ಒಂದು ಕಡೆ ಬೇಡ ಅನ್ನೋದು ಮತ್ತೊಂದೆಡೆ ಜಿಗುಟುವ ಕೆಲಸ ಮಾಡ್ತಿದೆ. ಕಾನೂನು ಕ್ರಮ ತೆಗೆದುಕೊಂಡಿದ್ದರೆ ಯಾಕೆ ಹೀಗೆ ಆಗ್ತಿತ್ತು ಎಂದು ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. ಎಲೆಕ್ಷನ್ ಒಂದೇ ವಿಚಾರದ ಬಗ್ಗೆ ಮಾತನಾಡ್ತೀರ. ಇದನ್ನೂ ಓದಿ : – ಸಚಿವ ಅಶ್ವತ್ಥ್ ನಾರಾಯಣ್ ರಾಜೀನಾಮೆ ನೀಡಲಿ – ಎಂ ಬಿ ಪಾಟೀಲ್ ಆಗ್ರಹ
ಉದ್ಯೋಗ,ಗೊಬ್ಬರ, ಹಾಲಿನ ದರದ ಬಗ್ಗೆ ಮಾತನಾಡಿ. ಎಲ್ಲ ವಸ್ತು ಬೆಲೆ ಏರಿಕೆ ಮಾಡ್ತಿದ್ದೀರಾ..? ಹಾಲಿನ ದರ ಏರಿಸಿ ರೈತರಿಗೆ ಆ ಹಣವನ್ನ ನೀಡಿ. ರೈತರಿಗೆ ಅನುಕೂಲ ಮಾಡಿಕೊಡಿ. ಪಶು ಆಹಾರ600 ಇದ್ದಿದ್ದು 1200 ಆಗಿದೆ. ಹಣ ಮಾಡುವುದನ್ನೆ ಕಾಯಕ ಮಾಡಿಕೊಳ್ಳಬೇಡಿ. ಕೆಪಿಎಸ್ಸಿ ಒಂದೇ ಅಲ್ಲ, ಏನೇನೋ ನಡೆದಿದೆ. ನಾನು ಸೋಮಶೇಖರ್ ಗೆ ಒಮ್ಮೆ ಫೋನ್ ಮಾಡಿದ್ದೆ. ಪಿಡಬ್ಲ್ಯುಡಿ, ಕೆಪಿಎಸ್ಸಿ ಎಲ್ಲದರಲ್ಲೂ ಹಗರಣ ನಡೆದಿದೆ. ಯಾವ್ಯಾವ ಹುದ್ದೆಗೆ ಎಷ್ಟು ಎಂದು ಬೋರ್ಡ್ ಹಾಕಿದ್ದಾರೆ. ಕಾಸಿಲ್ಲದೆ, ಭ್ರಷ್ಟಾಚಾರ ಇಲ್ಲದೆ ಈ ಸರ್ಕಾರದಲ್ಲಿ ಏನೂ ಆಗಲ್ಲ. ಮುಂದಿನ ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡ್ತೇವೆ ಎಂದು ತಿಳಿಸಿದ್ರು.
ಕೆಪಿಸಿಸಿ ಪ್ರಚಾರ ಸಮಿತಿ ಎಂಬಿ ಪಾಟೀಲ್ ಅಶ್ವಥ್ ನಾರಯಣ ಭೇಟಿ ವಿಚಾರ
ಅವರ ರಕ್ಷಣೆಗೆ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ಸಿಗರು ಏನು ಮಾಡಬಾರದು ಎಂದು ಭೇಟಿ ಮಾಡಿದ್ದಾರೆ. ಕೇಳಿದ್ರೆ ನಾವು ಎಜುಕೇಶನ್ ಇನ್ಸ್ಟಿಟ್ಯೂಷನ್ ಇಟ್ಕೊಂಡಿದ್ದೇವೆ ಅಂತ ಹೇಳ್ತಾರೆ. ಖಾಸಗಿ ಭೇಟಿ ಅಂತಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟ ಕೊಟ್ಟಿದ್ದಾರೆ.
ಇದನ್ನೂ ಓದಿ : – ಕೋಲಾರದಲ್ಲಿ ತಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಾವಿನ ಬೆಳೆ ಸಂಪೂರ್ಣ ನಾಶ