ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ 2A ಮೀಸಲಾತಿ ಕೊಟ್ಟೆ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
![](https://rajnewskannada.in/wp-content/uploads/2022/05/WhatsApp-Image-2022-05-06-at-11.40.29-AM-1-1024x768.jpeg)
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಲಿಂಗಾಯತ ಪಂಚಮಸಾಲಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಸಲಹೆಯನ್ನು ಒಳ್ಳೆರೀತಿಯಾಗಿ ತೆಗೆದುಕೊಂಡ್ರೆ ಅವರಿಗೆ ಒಳ್ಳೇದಾಗುತ್ತೆ. ಕೊಟ್ರೆ ಸನ್ಮಾನ ಮಾಡುತ್ತೇವೆ ಕೊಡದೇ ಇದ್ರೆ ಹೋರಾಟ ಮಾಡುತ್ತೇವೆ. ಕಳೆದ ಬಾರಿ ಹೋರಾಟ ಮಾಡಿದನ್ನು ನೋಡಿದ್ದಾರೆ. ಜನರ ನಾಡಿ ಮಿಡಿತ ಏನು ಎಂದು ಕೇಂದ್ರ ನಾಯಕರಿಗೆ ಗೋತ್ತಾಗಿದೆ. ಇದನ್ನು ಓದಿ :- 4-5ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ಹಗುರಗೊಳಿಸಲು ಸರ್ಕಾರ ಚಿಂತನೆ- ನಾಗೇಶ್
![](https://rajnewskannada.in/wp-content/uploads/2022/05/WhatsApp-Image-2022-05-06-at-11.40.29-AM-1024x768.jpeg)
ಕಳೆದ ಬಾರಿ ಬೆಂಗಳೂರಿನಲ್ಲಿ 10 ಲಕ್ಷ ಜನರ ಸೇರಿಸಿ ಪ್ರತಿಭಟನೆ ಮಾಡಿದ್ದೇವೆ. ಆ ರ್ಯಾಲಿ ಮಾಡಿದಕ್ಕೆ ಕರ್ನಾಟಕದಲ್ಲಿ ಲಿಂಗಾತರಲ್ಲಿ ಪಂಚಮಸಾಲಿ 70 ಪ್ರತಿಶತ ಇದ್ದಾರೆ ಎನ್ನುವುದು ಗೂತ್ತಾಗಿದ್ದು. ಇದನ್ನು ಸ್ವತಹ ಪ್ರಧಾನ ಮಂತ್ರಿಗಳೇ ಅವರ ಐಬಿ ದಿಂದ ಮಾಹಿತಿ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮನವರಿಕೆಯಾಗಿದೆ ಇದೊಂದು ದೊಡ್ಡ ಸಮಾಜ ನ್ಯಾಯ ಕೊಡಬೇಕು ಎಂದು ಮನವರಿಕೆಯಾಗಿದೆ. ಹೀಗಾಗಿ ಮೊನ್ನೆ ಮರಾಠಾ ಸಮುದಾಯಕ್ಕೆ 2A ಮೀಸಲಾತಿ ನೀಡಿದಾಗ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಕಾನೂನು ತಿದ್ದುಪಡಿ ಮಾಡಿ ಆಯಾ ರಾಜ್ಯಗಳಿಗೆ ಮೀಸಲಾತಿ ನೀಡುವ ಅವಕಾಶ ನೀಡಿದೆ.
![](https://rajnewskannada.in/wp-content/uploads/2022/05/WhatsApp-Image-2022-05-06-at-11.40.28-AM-1024x768.jpeg)
ಯಾಕೆಂದರೆ ಯಾವ ಯಾವ ರಾಜ್ಯದಲ್ಲಿ ಯಾವ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದೆ ಎಂದು ಪರಿಶೀಲನೆ ಮಾಡಿ ಮೀಸಲಾತಿ ನೀಡಲು ಅವಕಾಶ ನೀಡಿದೆ. ಹಿಂದುಳಿದ ಮೀಸಲಾತಿ ಆಯಾ ರಾಜ್ಯಗಳೇ ನೀಡಬೇಕು ಎಂದು ಸವಿದಾನ ತಿದ್ದುಪಡಿಯಾಗಿದೆ. ಇದರಿಂದ ನಮಗೇನು ನಿರೀಕ್ಷೆ ಎಂದರೆ ಈ ರಾಜ್ಯದಲ್ಲಿ ಇರುವ ಬಹುಸಂಖ್ಯೆ ಲಿಂಗಾಯತ ಬಡವರಿಗೆ ನ್ಯಾಯ ಸಿಗುತ್ತೆ ಎನ್ನುವ ನಿರೀಕ್ಷೆ ಇದೆ. ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪಾ ಹಚ್ಚುವ ಕೆಲಸ ಈಗಾಗಲೇ ಆಗಿದೆ. ಮೊನ್ನೆ ಸಿಎಂ ಬೊಮ್ಮಾಯಿ ವಿಧಾಸೌಧದಲ್ಲಿ ಹೇಳಿದ್ರು. 8-10 ದಿನದಲ್ಲಿ ವರದಿ ಬರುತ್ತೆ ವರದಿ ಆದರಿಸಿ ಸರ್ವ ಪಕ್ಷ ಸಭೆ ಕರೆದು ಮೀಸಲಾತಿ ನೀಡುತ್ತೇನೆ ಎಂದಿದ್ರು. ಅವರು ಹೇಳಿ ತಿಂಗಳ ಕಳೆಯುತ್ತಾ ಬಂದಿದೆ. ಇನ್ನುಮುಂದೆ ಕಾಯಲು ಆಗುವುದಿಲ್ಲ. ಏನು ಎನ್ನುವುದನ್ನು ಜನರ ಮುಂದೆ ಬಹಿರಂಗ ಪಡಿಸಬೇಕು.
ಇದನ್ನು ಓದಿ :- ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕೈ ಹಾಕಿದವರು ಇನ್ನೊಮ್ಮೆ ಹೀಗೆ ಮಾಡಲು ಆಗದಂತೆ ಮುಟ್ಟಿ ನೋಡಿಕೊಳ್ಳಬೇಕು ಹಾಗೆ ಮಾಡುತ್ತೇನೆ – ಆರಗ ಜ್ಞಾನೇಂದ್ರ