ಮಹಿಂದಾ ರಾಜಪಕ್ಷ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ – ಹಿಂಸಾಚಾರದಲ್ಲಿ 8 ಮಂದಿ ಸಾವು

ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಿದ ಬಳಿಕ ಶ್ರೀಲಂಕಾ ರಾಜಧಾನಿ ಕೊಲೊಂಬೊ ನಗರದಲ್ಲಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಾಳಿದೆ. ಭಾರೀ ಶಸ್ತ್ರಸಜ್ಜಿತ ಪಡೆಗಳು ಮಹಿಂದ ರಾಜಪಕ್ಸೆ ಅವರನ್ನು ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸದಿಂದ ಸ್ಥಳಾಂತರಿಸಿವೆ.

ಶ್ರೀಲಂಕಾ ಹಿಂಸಾಚಾರ | ರಾಜಕಾರಣಿಗಳ ಮನೆಗಳಿಗೆ ಬೆಂಕಿ: 8 ಸಾವು, 200 ಜನರಿಗೆ ಗಾಯ |  Prajavani


ರಾಜಧಾನಿ ಕೊಲೊಂಬೊದಲ್ಲಿರುವ ಮಹಿಂದಾ ರಾಜಪಕ್ಸ ಅವರ “ಟೆಂಪಲ್ ಟ್ರೀಸ್” ನಿವಾಸಕ್ಕೆ ಬಲವಂತವಾಗಿ ನುಗ್ಗಿದ ಪ್ರತಿಭಟನಾಕಾರರು ನಂತರ ರಾಜಪಕ್ಸೆ ಅವರ ಕುಟುಂಬಸ್ಥರು ಇರುವ ಎರಡು ಅಂತಸ್ತಿನ ಮುಖ್ಯ ಕಟ್ಟಡಕ್ಕೆ ನುಗ್ಗಲು ಪ್ರಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮುಂಜಾನೆ ಕಾರ್ಯಾಚರಣೆಯ ನಂತರ, ಮಹಿಂದ ರಾಜಪಕ್ಸ ಮತ್ತು ಅವರ ಕುಟುಂಬವನ್ನು ಸೇನೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಅವರ ಮನೆಯ ಕಂಪೌಂಡ್ ಮೇಲೆ ಕನಿಷ್ಠ 10 ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ. ಹಿಂಸಾತ್ಮಕ ಪ್ರತಿಭಟನೆಯ ನಂತರ ರಾಜಪಕ್ಸೆಯವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು, ಹಿಂಸಾಚಾರದಲ್ಲಿ ಶಾಸಕರು ಸೇರಿದಂತೆ ಇದುವರೆಗೆ 8 ಮಂದಿ ಮೃತಪಟ್ಟಿದ್ದು, ಸುಮಾರು 200 ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ : – ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ದಾಳಿ ಪ್ರಕರಣ – ತಪ್ಪಿತಸ್ಥರ ಸುಮ್ಮನೆ ಬಿಡಲ್ಲ ಎಂದ ಸಿಎಂ ಭಗವಂತ್ ಮಾನ್

ವಸಾಹತುಶಾಹಿ ಯುಗದ ಕಟ್ಟಡದ ಎಲ್ಲಾ ಮೂರು ಪ್ರವೇಶದ್ವಾರಗಳಲ್ಲಿ ಜನಸಮೂಹವನ್ನು ತಡೆಹಿಡಿಯಲು ಪೊಲೀಸರು ಅಶ್ರುವಾಯುಗಳ ಸುರಿಮಳೆಗೈದಿದ್ದಾರೆ. ಶುಕ್ರವಾರದಿಂದ ತುರ್ತು ಪರಿಸ್ಥಿತಿಯಲ್ಲಿರುವ ಕರ್ಫ್ಯೂಗೆ ಒಳಪಟ್ಟಿರುವ ದೇಶದಲ್ಲಿ ರಾಜಪಕ್ಸೆಯ ಉನ್ನತ ನಿಷ್ಠಾವಂತರ 12ಕ್ಕೂ ಅಧಿಕ ಮನೆಗಳನ್ನು ಸುಟ್ಟುಹಾಕಲಾಗಿದೆ.

ಇದನ್ನೂ ಓದಿ : –  ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!