ಟಿಆರ್ಎಸ್ ( Trs ) ಒಂದು ‘ಕುಟುಂಬ ಪಕ್ಷ’ವಾಗಿದ್ದು ಅಧಿಕಾರದಲ್ಲಿರಲು ಯೋಗ್ಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (NARENDRA MODI ) ತೆಲಂಗಾಣದ ( telangana ) ಆಡಳಿತಾರೂಢ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
![](https://rajnewskannada.in/wp-content/uploads/2022/05/WhatsApp-Image-2022-05-26-at-6.43.46-PM-1024x603.jpeg)
ತೆಲಂಗಾಣದಲ್ಲಿ ಬಿಜೆಪಿ ಮುಂದಿನ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಬಿಜೆಪಿ (bjp) ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದ್ದು, ಮುಂದಿನ ವಿಧಾನಸಭೆ ಚುನಾವಣೆಯ ನಂತರ ಸರ್ಕಾರ ಬದಲಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (Chandrashekar rao ) ಮತ್ತು ಅವರ ಕುಟುಂಬದ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ತೆಲಂಗಾಣದಲ್ಲಿ ‘ಕುಟುಂಬ ಆಡಳಿತ’ವನ್ನು ಕೊನೆಗಾಣಿಸುವಂತೆ ಜನರಿಗೆ ಕರೆ ನೀಡಿದರು. ಅಲ್ಲದೆ ಕುಟುಂಬ ಆಡಳಿತ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ :- ದೇವೇಗೌಡರನ್ನು ಭೇಟಿಯಾದ ತೆಲಂಗಾಣ ಸಿಎಂ
![](https://rajnewskannada.in/wp-content/uploads/2022/05/WhatsApp-Image-2022-05-26-at-6.43.14-PM.jpeg)
ಇತ್ತ ಮೋದಿ ತೆಲಂಗಾಣದಲ್ಲಿದ್ರೆ ಅತ್ತ ಸಿಎಂ ಕೆಸಿಆರ್ ಬೆಂಗಳೂರಿನಲ್ಲಿ ದೇವೇಗೌಡರನ್ನ ಭೇಟಿಯಾದ್ರು.
ಶಿಷ್ಟಾಚಾರದ ಪ್ರಕಾರ ಯಾವುದೇ ರಾಜ್ಯದ ಸಿಎಂ ಯಾವುದೇ ಪಕ್ಷವಾಗಿರಲಿ ಪ್ರಧಾನಿಯನ್ನ ಸ್ವಾಗತಿಸಬೇಕು. ಆದ್ರೆ ಕೆಸಿಆರ್ ಈ ಹಿಂದೆಯೂ ಪ್ರಧಾನಿ ಕಾರ್ಯಕ್ರಮವನ್ನ ಬಹಿಷ್ಕರಿಸಿದ್ದರು. ಈ ಮೂಲಕ ಕಳೆದ ನಾಲ್ಕು ತಿಂಗಳಲ್ಲಿ ಕೆಸಿಆರ್ ಮೋದಿ ಭೇಟಿಯನ್ನ ಎರಡು ಬಾರಿ ತಪ್ಪಿಸಿದ್ದಾರೆ. ಇದನ್ನೂ ಓದಿ :- ಸರ್ಕಾರ, ಸಮಸ್ಯೆಗಳ ಬಗ್ಗೆ ದೇವೇಗೌಡರ ಜೊತೆ ಚರ್ಚೆ ಮಾಡಲಾಗಿದೆ – ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್