ಗುಬ್ಬಿಯಲ್ಲಿ ಡಿಎಸ್ ಎಸ್ ಮುಖಂಡ ಬರ್ಬರ ಹತ್ಯೆ – ಪೊಲೀಸರಿಂದ ತನಿಖೆ ಚುರುಕು

ತುಮಕೂರಿನ ಗುಬ್ಬಿಯಲ್ಲಿ(Tumkuru gubbi) ಡಿಎಸ್ಎಸ್ ಮುಖಂಡ ನರಸಿಂಹಮೂರ್ತಿ (Narasimha murthy) ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ (Rahul kumar shahapuravad) ಪ್ರತಿಕ್ರಿಯಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ.

ವಿಚಾರಣೆ ಮಾಡುತ್ತಿದ್ದೇವೆ. ಕೊಲೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಬಂಧಿತರಲ್ಲಿ ಕೆಲವರು ಸ್ಥಳೀಯರಾಗಿದ್ದು ಇನ್ನೂ ಕೆಲವರು ಹೊರಗಡೆಯವರು ಇದ್ದಾರೆ ಎಂದು ತಿಳಿಸಿದ್ರು.
ಗುಬ್ಬಿಯಲ್ಲಿ ನರಸಿಂಹಮೂರ್ತಿ ಕುಟುಂಬಕ್ಕೆ ಸಾಂತ್ವನ ಹೇಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ (Narayanaswamy) ನರಸಿಂಹಮೂರ್ತಿ ಅವರು ದಲಿತ ಮುಖಂಡರು, ಪಪಂ ಸದಸ್ಯರಾಗಿದ್ದವರು. ಅಂಥವರ ಕೊಲೆ ಆಗಿರೋದು ದಿಗ್ಭ್ರಮೆಗೊಳಿಸಿದೆ. ಈ ಕೊಲೆಗೆ ರಾಜಕೀಯ ಬಣ್ಣ ಕಟ್ಟೋದು ಬೇಡ. ಹಾಡಹಗಲೆ ಕೊಲೆ ಆಗಿದೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆದರೂ ಪೊಲೀಸರು ಶಂಕಿತರನ್ನು ಶೀಘ್ರದಲ್ಲೇ ಬಂಧಿಸಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : –  ವಿಧಾನಸೌಧದಲ್ಲಿ ವಿಧಾನ ಪರಿಷತ್ತಿನ ನೂತನ ಸದಸ್ಯರಿಂದ ಪ್ರಮಾಣವಚನ ಸ್ವೀಕಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!