ಪತ್ನಿಯ ಶೀಲ ಶಂಕಿಸಿ ಪತಿಯಿಂದಲೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದ ಕೊರಚರಪೇಟೆಯಲ್ಲಿ ನಡೆದಿದೆ.
![](https://rajnewskannada.in/wp-content/uploads/2022/05/Capture1-11.png)
ಉತ್ತರ ಪ್ರದೇಶ ಮೂಲದ ಮಮತಾ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಪತಿ ಅರವಿಂದ್ ತನ್ನ ಹೆಂಡತಿ ಮಮತಾ ಮೇಲೆ ಶೀಲ ಶಂಕಿಸಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಅರವಿಂದ್ ತನ್ನ ಹೆಂಡತಿ ಮಮತಾಳ ಜೊತೆ ಆಗಾಗ್ಗೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
![](https://rajnewskannada.in/wp-content/uploads/2022/05/Capture2-1.png)
ಉತ್ತರ ಪ್ರದೇಶದ ಬುಲಂದ್ ಶಾಹರ್ ಮೂಲದ ದಂಪತಿಗಳಾಗಿದ್ದು, ಪತ್ನಿಯ ಕತ್ತು ಹಿಸುಕಿ ನೆಲಕ್ಕೆ ತಲೆ ಚೆಚ್ಚಿ ಕೊಲೆಗೈದಿದ್ದಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : – JAMMU TUNNEL COLLAPSE – ಜಮ್ಮು ರಾಷ್ಟ್ರೀಯ ಹೆದ್ದಾರಿ ಸುರಂಗ ಕುಸಿತದಲ್ಲಿ ಐವರು ದುರ್ಮರಣ- ನಾಪತ್ತೆಯಾದವರಿಗಾಗಿ ಶೋಧ