ಚುನಾವಣಾ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಇಂದು ಕೋರ್ ಕಮಿಟಿ ಸಭೆ ಇದೆ. ಅಭ್ಯರ್ಥಿಗಳು ಆಯ್ಕೆ ಮಾಡುವ ಸಂಬಂಧ ಚರ್ಚೆ ಮಾಡ್ತೀವಿ. ದಾವೋಸ್ ಪ್ರವಾಸಕ್ಕೆ ತೆರಳುವ ವಿಚಾರ ಇಂದು ತೀರ್ಮಾನ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
![](https://rajnewskannada.in/wp-content/uploads/2022/05/ಚಮ-1-3.png)
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಂದು ಕೋರ್ ಕಮಿಟಿ ಸಭೆ ಇದೆ. ನಮ್ಮನಾಯಕರಾದ ಅರುಣ್ ಸಿಂಗ್ ಬರ್ತಿದಾರೆ. ಹಲವು ವಿಚಾರಗಳ ಚರ್ಚೆ ಆಗುತ್ತೆ. ದಾವೋಸ್ ಗೆ ಇಬ್ಬರು ಸಿಎಂಗಳಿಗೆ ಆಹ್ವಾನ ಬಂದಿದೆ. ಇದನ್ನೂ ಓದಿ : – ನಾಗೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಧನ್ಯವಾದ
![](https://rajnewskannada.in/wp-content/uploads/2022/05/ಚಮ-3-1.png)
ಇಬ್ಬರು ಸಿಎಂಗಳಲ್ಲಿ ನಾನೂ ಒಬ್ಬ. ಹಾಗಾಗಿ ಇದು ಬಹಳ ಮುಖ್ಯವಾದ ಕಾರ್ಯಕ್ರಮ. ರಾಜ್ಯದಲ್ಲಿ ವಿವಿಧ ಚುನಾವಣೆಗಳು ಬಂದಿವೆ. ಹೀಗಾಗಿ ಎಷ್ಟು ದಿನ ಹೋಗಬೇಕು, ಯಾವತ್ತು ಹೋಗಬೇಕು ಅಂತ ಇಂದು ಮಧ್ಯಾಹ್ನ ತೀರ್ಮಾನ ಮಾಡ್ತೇನೆ. 2-3 ದಿನಗಳಲ್ಲಿ ನಿರ್ಣಯ ತಿಳಿಸ್ತೇವೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು