ರಮೇಶ ಜಾರಕಿಹೊಳಿ-ಉಮೇಶ ಕತ್ತಿ , ಸವದಿ ಬಣಗಳ ಆಂತರಿಕ ಕಿತ್ತಾಟದಿಂದ ಬೆಳಗಾವಿ ಜಿಲ್ಲಾ ಬಿಜೆಪಿ ಅಕ್ಷರಶಃ ನಲುಗಿ ಹೋಗಿತ್ತು. ಅತ್ತ ಶಾಸಕ ಯತ್ನಾಳ್ ಹಾಗೂ ಸಚಿವ ಮುರುಗೇಶ ನಿರಾಣಿ (murugesha nirani ) ಕಚ್ಚಾಟದಿಂದ ವಿಜಯಪುರ-ಬಾಗಲಕೋಟೆ ಜಿಲ್ಲಾ ಬಿಜೆಪಿ ಸೊರಗಿ ಹೋಗಿದೆ.
ಕಳೆದ ಪರಿಷತ್ ಚುನಾವಣೆಯಲ್ಲಿ ಭುಗಿಲೆದ್ದ ಬಿಜೆಪಿಯ ಆಂತರಿಕ ಭಿನ್ನಮತ ಇಂದಿಗೂ ಹಾಗೆಯೇ ಕೊತ ಕೊತ ಕುದಿಯುತ್ತಿದೆ. ಸಿಎಂ ಆದಿಯಾಗಿ ರಾಜ್ಯ ಬಿಜೆಪಿ ನಾಯಕರು ಅದೆಷ್ಟೇ ಪ್ರಯತ್ನಿಸಿದ್ರು ಭಿನ್ನಮತ ಶಮನ ಮಾಡಲು ಸಾಧ್ಯವಾಗಿಲ್ಲ. ಸದ್ಯ ವಾಯುವ್ಯ ಶಿಕ್ಷಕರ ಹಾಗೂ ಪದವಿಧರ ಕ್ಷೇತ್ರಗಳ ಪರಿಷತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಶತಾಯ ಗತಾಯ ಪರಿಷತ್ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರ ಹೆಣೆದಿದೆ.
![](https://rajnewskannada.in/wp-content/uploads/2022/05/nir-1-1.png)
ಇದರ ಭಾಗವಾಗಿ ಚುನಾವಣಾ ಸಂಯೋಜಕರಾದ ಎನ್.ರವಿಕುಮಾರ್, ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ನಡೆದ ಪೂರ್ವಬಾವಿ ಸಭೆಗೆ ಪ್ರಮುಖ ಘಟಾನುಘಟಿ ನಾಯಕರು ಗೈರಾಗಿದ್ದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಭಿನ್ನಮತ ಶಮನ ಮಾಡುವ ಜವಾಬ್ದಾರಿಯನ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೆಗಲಿಗೆ ವಹಿಸಲಾಗಿದೆ. ಯತ್ನಾಳ್ ಹಾಗೂ ನಮ್ಮ ಮಧ್ಯೆ ವೈಯಕ್ತಿಕ ಭಿನ್ನಾಭಿಪ್ರಾಯ ಇರಬಹುದು .ಆದ್ರೆ ಪಕ್ಷದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಪರಿಷತ್ ಅಭ್ಯರ್ಥಿ ಹಣಮಂತ ನಿರಾಣಿ (HANUMANTH NIRANI ) ಹೇಳಿದ್ದಾರೆ. ಇದನ್ನೂ ಓದಿ :- ಗಣಿ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂಕೋರ್ಟ್ ..!