ರಾಷ್ಟ್ರಪತಿಗಳಿಗೆ (Rashtrapathi) ರಾಜ್ಯಪಾಲರ (Rajyapal) ಮೂಲಕ ಮನವಿ ಪತ್ರ ಸಲ್ಲಿಸಿದ್ದೇವೆ, ನಮಗೆ ರಾಜ್ಯಪಾಲರು ಸಿಗಲಿಲ್ಲ ಎಂದು ರಾಜಭವನದ (Rajbhavan) ಭೇಟಿ ಬಳಿಕ ಸಲೀಂ ಅಹಮದ್ (Salim ahamed) ಹೇಳಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು ರಾಜ್ಯಪಾಲರ ಕಾರ್ಯದರ್ಶಿಯವರಿಗೆ ಮನವಿ ಪತ್ರ ನೀಡಿದ್ದೇವೆ.
ರಾಹುಲ್ ಗಾಂಧಿ (Rahul gandhi) ಅವರಿಗೆ ಹತ್ತು ಗಂಟೆ ಮಾನಸಿಕ ಹಿಂಸೆ ಕೊಡುವ ಕೆಲಸ ಮಾಡಲಾಗ್ತಿದೆ. ಸಿಬಿಐ, ED ಮತ್ತು IT ಬಿಜೆಪಿ ಹೇಳಿದಂತೆ ಕೇಳುತ್ತಿದ್ದಾರೆ. ತಪ್ಪು ಮಾಡದ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ (Soniya gandhi) ಕಿರುಕುಳ ಕೊಡುತ್ತಿದ್ದಾರೆ. ಕೋಟ್ಯಂತರ ಬೆಂಬಲಿಗರು, ಕಾರ್ಯಕರ್ತರು ರಾಹುಲ್ ಗಾಂಧಿ ಬೆಂಬಲಕ್ಕೆ ಇದ್ದಾರೆ. ನಾವು ಯಾವುದಕ್ಕೂ ಹೆದರಲ್ಲ, ಈ ಹೋರಾಟ ನಿಲ್ಲಲ್ಲ, ಮುಂದುವರೆಯುತ್ತೆ ಎಂದು ಹೇಳಿದರು. ಇದೇ ವೇಳೆ ನಮ್ಮ ಪ್ರತಿಭಟನೆಗೆ ಬಿಜೆಪಿ (BJP) ಸರ್ಕಾರ ಅಡ್ಡಿ ಪಡಿಸಿತು, ನಮ್ಮ ನಾಯಕರನ್ನು ಬಂಧಿಸಲಾಗಿದೆ.
![](https://rajnewskannada.in/wp-content/uploads/2022/06/image-274-1024x576.png)
ಎಲ್ಲಿದೆ ಪ್ರಜಾಪ್ರಭುತ್ವ? ಎಂದು ಪ್ರಶ್ನಿಸಿದ್ದಾರೆ. ನಮ್ಮ ಹಕ್ಕುಗಳನ್ನು ಮೊಟಕು ಮಾಡಲಾಗಿದೆ, ನಮ್ಮನ್ನು ತಳ್ಳಾಡಿ ಬಲವಂತವಾಗಿ ಬಂಧಿಸಲಾಯ್ತು. ಇದು ಸರಿಯಲ್ಲ, ED ಸಂಸ್ಥೆಯ ನಡೆಯನ್ನು ನಾವು ವಿರೋಧಿಸುತ್ತೇವೆ. ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು, ಸಂವಿಧಾನ ಉಳಿಸುವ ಕೆಲಸವನ್ನು ಪಕ್ಷ ಬೇಧ ಮರೆತು ರಾಷ್ಟ್ರಪತಿಗಳು ಮಾಡಬೇಕು ಎಂದು ಸಲೀಂ ಅಹಮದ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ : – ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂಆರ್ ಶಾಗೆ ಹೃದಯಾಘಾತ- ದಿಲ್ಲಿಗೆ ಏರ್ ಲಿಫ್ಟ್