ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಶಿಕ್ಷೆಗೆ ಒಳಗಾದವರಲ್ಲಿ ಒಬ್ಬನಾದ ಎಜಿ ಪೆರಾರಿವಾಲನ್ಗೆ ಸುಪ್ರೀಂಕೋರ್ಟ್ ಬಿಡುಗಡೆಯ ಭಾಗ್ಯ ನೀಡಿದೆ.
![](https://rajnewskannada.in/wp-content/uploads/2022/05/WhatsApp-Image-2022-05-18-at-1.46.12-PM.jpeg)
31 ವರ್ಷಗಳ ಕಾಲ ಕಂಬಿಯ ಹಿಂದೆ ಕಳೆದಿದ್ದ ಪೆರಾರಿವಾಲನ್ ಬಿಡುಗಡೆಯಾಗಲಿದ್ದಾನೆ. ಈ ತೀರ್ಪು, ನಳಿನಿ ಶ್ರೀಹರನ್ ಮತ್ತು ಆಕೆಯ ಪತಿ, ಶ್ರೀಲಂಕಾ ಪ್ರಜೆ ಮುರುಗನ್ ಸೇರಿದಂತೆ ಇತರೆ ಆರು ಮಂದಿ ಅಪರಾಧಿಗಳ ಬಿಡುಗಡೆಗೆ ಕೂಡ ದಾರಿ ಸುಗಮ ಮಾಡಿಕೊಡುವ ಸಾಧ್ಯತೆ ಇದೆ. ಇದನ್ನೂ ಓದಿ :- ಕೈಗೆ ಗುಡ್ ಬೈ ಹೇಳಿದ ಶಾಸಕ ಹಾರ್ದಿಕ್ ಪಟೇಲ್
![](https://rajnewskannada.in/wp-content/uploads/2022/05/WhatsApp-Image-2022-05-18-at-1.47.02-PM-1024x683.jpeg)
“ತಮಿಳುನಾಡು ರಾಜ್ಯ ಸಂಪುಟ ತೆಗೆದುಕೊಂಡ ಅಂಶಗಳನ್ನು ಪರಿಗಣಿಸಿ, ಅದರ ಆಧಾರದಲ್ಲಿ ನ್ಯಾಯಪೀಠವು ಈ ನಿರ್ಧಾರ ತೆಗೆದುಕೊಂಡಿದೆ. “ಸತ್ಯ ಮತ್ತು ನ್ಯಾಯ ಎರಡೂ ನಮ್ಮ ಕಡೆಗಿವೆ. ಜನರ ಪ್ರೀತಿ ಮತ್ತು ಬೆಂಬಲ ಇಲ್ಲದೆ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಪೆರಾರಿವಾಲನ್ ತೀರ್ಪಿನ ಬಳಿಕ ಹೇಳಿದ್ದಾನೆ.
![](https://rajnewskannada.in/wp-content/uploads/2022/05/image-12.jpeg)
ಹತ್ಯೆ ಸಂದರ್ಭದಲ್ಲಿ 19 ವರ್ಷದವನಾಗಿದ್ದ ಪೆರಾರಿವಾಲನ್, ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಎಲ್ಟಿಟಿಇಯ ಶಿವರಸನ್ಗಾಗಿ ಎರಡು 9 ವೋಲ್ಟ್ ಬ್ಯಾಟರಿಗಳನ್ನು ಖರೀದಿ ಮಾಡಿದ ಆರೋಪಿಯಾಗಿದ್ದಾನೆ.
![rajiv gandhi assassination: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕನಿಗೆ ಜಾಮೀನು : 30 ವರ್ಷ ಜೈಲಿನಲ್ಲಿದ್ದ ಪೆರಾರಿವಾಲನ್ - rajiv gandhi assassination convict gets bail, was in jail for over 32 years ...](https://vijaykarnataka.com/photo/msid-90112831,imgsize-8826/pic.jpg)
ಈ ಬ್ಯಾಟರಿಗಳನ್ನು 1991ರಲ್ಲಿ ರಾಜೀವ್ ಗಾಂಧಿ ಅವರನ್ನು ಕೊಲ್ಲುವ ಬಾಂಬ್ಗಳಲ್ಲಿ ಬಳಸಲಾಗಿತ್ತು. 1998ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಪೆರಾರಿವಾಲನ್ಗೆ ಮರಣದಂಡನೆ ವಿಧಿಸಿತ್ತು. ಮರು ವರ್ಷ ಸುಪ್ರೀಂ ಈ ತೀರ್ಪನ್ನು ಎತ್ತಿಹಿಡಿದಿದ್ದರೂ, 2014ರಲ್ಲಿ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.
ಇದನ್ನೂ ಓದಿ :- ರಾಜಕಾಲುವೆ ಒತ್ತುವರಿಯಿಂದ ಮಳೆ ಅನಾಹುತ, ಮನೆಯೊಳಗೆ ನೀರು ನುಗ್ಗಿ ಹಾನಿಯಾದವರಿಗೆ 25 ಸಾವಿರ ರೂ ಪರಿಹಾರ – ಸಿಎಂ ಘೋಷಣೆ