ರಮ್ಯಾ-ನಲಪಾಡ್ ಟ್ವೀಟರ್ ವಿಚಾರಕ್ಕೆ ಸಂಬಂಧಿಸಿದಂತೆ ನಲಪಾಡ್ ಗೆ ಎಂಎಲ್ಸಿ ರಾಜೇಂದ್ರ ಟಾಂಗ್ ಕೊಟ್ಟಿದ್ದಾರೆ.
![](https://rajnewskannada.in/wp-content/uploads/2022/05/image-9.jpeg)
ತುಮಕೂರಿನಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಎಲ್ಲರ ವಿಶ್ವಾಸದಲ್ಲಿ ಎಲ್ಲರೂ ಇರೋದು ಸಹಜ. ನಮ್ಮ ಪಕ್ಷದ ಯುವ ಕಾಂಗ್ರೆಸ್ ಅಧ್ಯಕ್ಷರು ಉಡುಪಿಯಲ್ಲಿ ರಮ್ಯ ಬಗ್ಗೆ ಮಾತನಾಡಿದ್ದಾರೆ. ನಾನು ಕೂಡ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ,ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ನಮಗೆ ಜವಾಬ್ದಾರಿ ಕೊಟ್ಟಿರ್ತಾರೆ. ಇದನ್ನೂ ಓದಿ : – 7 ವರ್ಷಗಳಿಂದ ಯುವತಿ ಹಿಂದೆ ನಾಗೇಶ್ ಬಿದ್ದಿದ್ದ – ನಾಗನ ರೋಚಕ ಕಹಾನಿ ಬಿಚ್ಚಿಟ್ಟ ಕಮಲ್ ಪಂತ್
![ನಲಪಾಡ್ ಹಳೇ ಕೇಸ್ ಕೆದಕಿ ಕೆಣಕಿದ ನಟಿ ರಮ್ಯಾ; ಜಾಮೀನಿನ ಮೇಲಿರುವ ಅಧ್ಯಕ್ಷ ಎಂದು ವ್ಯಂಗ್ಯ.. –](https://www.vijayavani.net/wp-content/uploads/2022/05/Ramya-Nalapad.jpg)
ರಾಜ್ಯ, ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡೋದು ಇರೋದಿಲ್ಲಾ. ನಲಪಾಡ್ ಮಾತನಾಡಿರೋದು ಪಕ್ಷಕ್ಕೆ ಗೌರವ ತರುವಂತದಲ್ಲ. ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದ್ರೂ ಸಂಘಟನೆಗೆ ಬರಬಹುದು. ಯಾರನ್ನೋ ಒಬ್ರನ್ನ ಓಲೈಕೆ ಮಾಡೋದು ತಪ್ಪು. ಅಧ್ಯಕ್ಷರಾಗೋಕೆ ಯಾರಾದರೊಬ್ಬರ ಸಪೋರ್ಟ್ ಇರುತ್ತೆ. ಅವರನ್ನೇ ಓಲೈಸಿದ್ರೆ ಪಕ್ಷ ಸಂಘಟನೆಯಾಗಲ್ಲ. ಯೂತ್ ಕಾಂಗ್ರೆಸ್ ಗೆ ಬುದ್ದಿ ಹೇಳಿದರೇ ಮುಂದಿನ ದಿನಗಳು ಒಳ್ಳೆದಾಗುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿನೇ ಕಾರಣ – ಪೊಲೀಸರ ಮುಂದೆ ಆ್ಯಸಿಡ್ ನಾಗ ಸ್ಫೋಟಕ ಹೇಳಿಕೆ