ಪ್ರೀತಿಸಿದವಳ ಮಾನ ತೆಗೆದಿದ್ದಕ್ಕೆ ಪ್ರಿಯಕರನ ಹತ್ಯೆಯಾಗಿರುವ ಘಟನೆ ಬೆಂಗಳೂರಿ (Bengaluru) ನ ಬೇಗೂರು ಠಾಣೆ ಬಳಿಯ ನ್ಯೂ ಮೈಕೋ ಲೇಔಟ್ ನಲ್ಲಿ ನಡೆದಿದೆ. ಪ್ರತಿಭಾ ಹಾಗೂ ಡಾ ವಿಕಾಸ್ ಇಬ್ಬರು ಪ್ರೀತಿಸಿದ್ರು. ಕೆಲ ದಿನಗಳ ಹಿಂದೆ ಎರಡೂ ಕುಟುಂಬದವರೂ ನವೆಂಬರ್ (November) ನಲ್ಲಿ ಮದುವೆಗೆ ಒಪ್ಪಿಗೆ ನೀಡಿದ್ದರು.
ವಿಕಾಸ್ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದ. ಚೆನ್ನೈ ನಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದ. ಮದುವೆಗೆ ಒಪ್ಪಿದ್ದ ಹುಡುಗಿ ಹಾಗೂ ಅವರ ತಾಯಿಯ ಅಶ್ಲೀಲ ವಿಡಿಯೋವನ್ನು ಡಾ ವಿಕಾಸ್ ಸೆರೆ ಹಿಡಿದ್ದಿದ್ದ. ಅಶ್ಲೀಲ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಗೆ ಹಾಕಿದ್ದ. ಈ ವಿಚಾರಕ್ಕೆ ಪ್ರತಿಭಾ ಹಾಗು ಕುಟುಂಬದವರು ಗಲಾಟೆ ಮಾಡಿದ್ದರು. ಪ್ರತಿಭಾ ಈ ವಿಚಾರವನ್ನು ತನ್ನ ಗೆಳೆಯರ ಬಳಿ ಹೇಳಿಕೊಂಡಿದ್ಲು. ಗೆಳೆಯರಾದ ಸುಶೀಲ್, ಗೌತಮ್ ಮತ್ತು ಸೂರ್ಯ ಸೇರಿ ವಿಕಾಸ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಡಾ ವಿಕಾಸ್ ಅಸ್ಪತ್ರೆಗೆ ಸೇರಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಕಾಸ್ ಸಾವನ್ನಪ್ಪಿದ್ದಾನೆ. ಸದ್ಯ ಸುಶೀಲ್, ಗೌತಮ್, ಮತ್ತು ಪ್ರತಿಭಾರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯಾದ ಸೂರ್ಯ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ : – ವಿಜಯನಗರದಲ್ಲಿ ಮಕ್ಕಳಲ್ಲಿ ಉಣ್ಣೆ ಜ್ವರದ ಆತಂಕ…!