ರಾಮನಗರ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜಕೀಯ ಜಂಜಾಟದಿಂದ ಸ್ವಲ್ಪ ದೂರವಿದ್ದು, ವ್ಯವಸಾಯ ಹಾಗೂ ಹೈನುಗಾರಿಕೆ ಕಡೆಗೆ ಒಲವು ತೋರಿದ್ದಾರೆ. ರಾಮನಗರದ ಬಿಡದಿಯ ಕೇತುಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಲಾಕ್ ಡೌನ್ ದಿನಗಳನ್ನ ಕಳೆಯುತ್ತಿದ್ದಾರೆ.
ತಮ್ಮ ತೋಟದ ಮನೆಯಲ್ಲಿ ವ್ಯವಸಾಯಕ್ಕೆ ಒತ್ತು ಕೊಟ್ಟು ಸಮಯ ಕಳೆಯುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟು ಕುಟುಂಬ ಸಮೇತರಾಗಿ ತೋಟದ ಮನೆ ಸೇರಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಜತೆಗೆ ತೋಟದ ಮನೆಯಲ್ಲಿ ವಾಸ್ಥವ್ಯ ಹೂಡಿದ್ದಾರೆ.
![](https://rajnewskannada.in/wp-content/uploads/2021/05/hd-kumarswamy.jpg)
ಹೇಳಿ ಕೇಳಿ ಕುಮಾರಸ್ವಾಮಿ ಇಷ್ಟಪಟ್ಟು ಕೇತುಗಾನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನಲ್ಲಿ ಇದೀಗ ವ್ಯವಸಾಯದ ಜತೆಗೆ ದೇಶಿ ತಳಿಗಳ ಗೋವುಗಳನ್ನ ಸಾಕಣೆ ಮಾಡಲು ಮುಂದಾಗಿದ್ದಾರೆ.
ನಿನ್ನೆ ಬಸವ ಜಯಂತಿಯ ಹಿನ್ನೆಲೆಯಲ್ಲಿ ನಾಲ್ಕು ವಿವಿಧ ತಳಿಯ ಗೋವುಗಳನ್ನ ತಮ್ಮ ಇಷ್ಟದ ತೋಟಕ್ಕೆ ಕುಟುಂಬ ಸಮೇತರಾಗಿ ಪೂಜೆ ಮಾಡಿ ಬರಮಾಡಿಕೊಂಡಿದ್ದಾರೆ. ಕಪಿಲ, ಸ್ವರ್ಣಕಪಿಲ, ಗಿರ್ ತಳಿಯ ನಾಲ್ಕು ಗೋವುಗಳನ್ನು ತೋಟಕ್ಕೆ ಕುಮಾರಸ್ವಾಮಿ ತರಿಸಿಕೊಂಡಿದ್ದಾರೆ. ಗೋವುಗಳ ಪೋಷಣೆ ಮಾಡುತ್ತಾ ಕುಮಾರಸ್ವಾಮಿ ಕುಟುಂಬ ಲಾಕ್ ಡೌನ್ ಕಾಲ ಕಳೆಯುತ್ತಿದ್ದಾರೆ.