ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (BJP) ಭರ್ಜರಿ ಸಿದ್ಧತೆ ನಡೆಸಿದೆ. ಇದೀಗ ರಾಜ್ಯಗಳಿಗೆ ಉಸ್ತುವಾರಿ ನಾಯಕರ ನೇಮಕ ಮಾಡಿದೆ.
![](https://rajnewskannada.in/wp-content/uploads/2022/06/WhatsApp-Image-2022-06-01-at-5.06.33-PM.jpeg)
ಜೂನ್ 10ರಂದು ರಾಜ್ಯಸಭಾ ಚುನಾವಣೆ (RS ELECTION) ನಡೆಯಲಿದೆ. ಬಿಜೆಪಿ ನಾಯಕ ಹಾಗೂ ವಕ್ತಾರ ಅರುಣ್ ಸಿಂಗ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ರಾಜ್ಯಸಭೆ ಚುನಾವಣೆ ನಡೆಯುವ ನಾಲ್ಕು ರಾಜ್ಯಗಳಿಗೆ ಉಸ್ತುವಾರಿ ನಾಯಕರನ್ನು ನೇಮಿಸಿದ್ದಾರೆ. ಇದನ್ನೂ ಓದಿ : – ಪಠ್ಯಪುಸ್ತಕ ಪರಿಷ್ಕರಣೆ ವಿವಾದ- ನಾಳೆ ಶಿಕ್ಷಣ ಸಚಿವ ನಾಗೇಶ್ ವರದಿ ಸಲ್ಲಿಕೆ – ಸಿಎಂ ಬೊಮ್ಮಾಯಿ
![](https://rajnewskannada.in/wp-content/uploads/2022/06/image-5-1024x683.png)
ರಾಜ್ಯಸಭೆ ಚುನಾವಣೆ ನಡೆಯುವ ರಾಜಸ್ಥಾನಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರ್ಯಾಣ ರಾಜ್ಯಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕರ್ನಾಟಕಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ (KISHAN REDDY) ಮತ್ತು ಮಹಾರಾಷ್ಟ್ರಕ್ಕೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಉಸ್ತುವಾರಿ ನಾಯಕರಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ : – ಯಾರನ್ನಾದ್ರೂ ಗಡಿಪಾರು ಮಾಡಿ ನಾವು ಚಂದ ನೋಡಲಿಕ್ಕೆ ಆಗಲ್ಲ – ಆರಗ ಜ್ಞಾನೇಂದ್ರ