RSS ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ – ವಿ. ಸೋಮಣ್ಣ

ಆರ್ ಎಸ್ ಎಸ್ (RSS ) ಚಡ್ಡಿ ಸುಡುವ ಕಾಂಗ್ರೆಸ್ (CONGRESS ) ಅಭಿಯಾನದ ವಿಚಾರವಾಗಿ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಮಾತಾಡಬಾರದು ಎಂದು ನಮಗೆ ಆದೇಶ ಬಂದಿದೆ. ಹೀಗಾಗಿ ಸೂಕ್ಷ್ಮ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ. ಈ ದೇಶದ ಪ್ರತಿ ಕಣ ಕಣದಲ್ಲೂ ಆರ್ ಎಸ್ ಎಸ್ ನ ಕೊಡುಗೆ ಇದೆ. ಕೆಲವರ ನಂಬಿಕೆಗಳಿಗೆ ಅಪಮಾನ ಅಗೌರವ ಮಾಡುವುದು ಸರಿಯಲ್ಲ ಎಂದಷ್ಟೇ ಹೇಳುತ್ತೇನೆ. ಇವೆಲ್ಲಾವೂ ಬೀದಿ ಜಗಳ ಆಗಬಾರದು. ಎಲ್ಲವೂ ಸುಖಾಂತ್ಯವಾಗಬೇಕು ಎಂದು ತಿಳಿಸಿದ್ರು. ಇದನ್ನೂ ಓದಿ : –  RSS ಕಚೇರಿಗಳ ಮೇಲೆ ದಾಳಿ ಬೆದರಿಕೆ ಸಂದೇಶ – ರಾಜ್ಯದ ಸಂಘದ ಕಚೇರಿಗಳಿಗೆ ಬಿಗಿ ಭದ್ರತೆ


ಯಡಿಯೂರಪ್ಪ ಸಿದ್ದರಾಮಯ್ಯ ಭೇಟಿಯಾದ ವಿಚಾರ
ಅದು ಕೇವಲ ಸೌಹರ್ಧಯುತ ಭೇಟಿ. ಇಬ್ಬರು ಆಕಸ್ಮಿತವಾಗಿ ಭೇಟಿಯೇ ಆಗಬಾರದಾ.? ಅದನ್ನ ಯಾರು ವಿಡಿಯೋ ಮಾಡಿ ಹೊರಗಡೆ ಬಿಟ್ಟಿದ್ದಾರೆ. ಅವರಿಬ್ಬರು ರಾಜ್ಯಸಭೆ ವಿಚಾರವಾಗಿ ಮಾತನಾಡಿಯೇ ಇಲ್ಲಾ. ಈ ಭೇಟಿಗೆ ಬೇರೆ ತರಹದ ಅರ್ಥಗಳನ್ನ ಕಲ್ಪಿಸಬೇಡಿ ಎಂದು ಹೇಳಿದ್ರು.

ಇದನ್ನೂ ಓದಿ : – ದ್ವಿತೀಯ ಪಿಯು ಪಠ್ಯ ಪರಿಷ್ಕರಣೆ – ರೋಹಿತ್ ಚಕ್ರತೀರ್ಥಗೆ ಕೊಕ್..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!