ದ್ವಿತೀಯ ಪಿಯು ಪಠ್ಯ ಪರಿಷ್ಕರಣೆಯಿಂದ ರೋಹಿತ್ ಚಕ್ರತೀರ್ಥರನ್ನ ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಪಿಯು ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥರನ್ನು ಸರ್ಕಾರ ನೇಮಿಸಿತ್ತು.
![](https://rajnewskannada.in/wp-content/uploads/2022/06/image-92.png)
ಶಾಲಾ ಪಠ್ಯದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿಯ ಸಾಲು ಸಾಲು ಎಡವಟ್ಟು ಹಿನ್ನೆಲೆ ಪಿಯು ಪಠ್ಯ ಪರಿಷ್ಕರಣೆಯಿಂದ ರೋಹಿತ್ ಸಮಿತಿಯನ್ನ ಶಿಕ್ಷಣ ಇಲಾಖೆ ಕೈ ಬಿಟ್ಟಿದೆ. ದ್ವಿತೀಯ ಪಿಯುಸಿ ಅಧ್ಯಾಯ 4.2 ಹೊಸ ಧರ್ಮಗಳ ಉದಯ ಪಠ್ಯಭಾಗ ಪರಿಷ್ಕರಣೆಗೆ ಈ ಹಿಂದೆ ನೀಡಲಾಗಿತ್ತು.ರೋಹಿತ್ ಸಮಿತಿಯನ್ನು ವಿಸರ್ಜಿಸಿರೋದ್ರಿಂದ ಪಿಯು ಪರಿಷ್ಕರಣಾ ವರದಿಯನ್ನ ಪಡೆಯೋದಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : – ಒಂದು ವಾರದಲ್ಲಿ ಪಠ್ಯವನ್ನು ಪಬ್ಲಿಕ್ ಡೊಮೈನ್ ನಲ್ಲಿ ಇಡ್ತೀವಿ – ಬಿ.ಸಿ ನಾಗೇಶ್